ಕರ್ನಾಟಕ

ತುಮಕೂರಿನಲ್ಲಿ ಕಳೆಗಟ್ಟಿದ ದಸರಾ ವೈಭವ.. ಮೈಸೂರಿನಿಂದ ಆಗಮಿಸಿದ ಕುದುರೆಗಳು..!

ತುಮಕೂರು ಎಸ್ಪಿ ಅಶೋಕ್ ವೆಂಕಟ್, ಎಎಸ್ಪಿ ಮರಿಯಪ್ಪ, ಅಬ್ದುಲ್ ಖಾದರ್,ತುಮಕೂರು ನಗರ ಡಿವೈಎಸ್ ಪಿ ಚಂದ್ರಶೇಖರ್ ರಿಂದ ಪ್ರಾಯೋಗಿಕ ಕುದುರೆ ಪಥ ಸಂಚಲನ ನಡೆಯಲಿದೆ.

ತುಮಕೂರಿನಲ್ಲಿ ದಸರಾ ಸಂಭ್ರಮ ಹಿನ್ನೆಲೆ, ಮೈಸೂರಿನಿಂದ ಕುದುರೆಗಳು ಆಗಮಿಸಿವೆ. ಕರ್ನಾಟಕ ಸಶಸ್ತ್ರ ಅಶ್ವಾರೋಹಿ ದಳದಿಂದ 10 ಕುದುರೆಗಳು ಆಗಮಿಸಿವೆ. ತುಮಕೂರು ಎಸ್ಪಿ ಅಶೋಕ್ ವೆಂಕಟ್, ಎಎಸ್ಪಿ ಮರಿಯಪ್ಪ, ಅಬ್ದುಲ್ ಖಾದರ್,ತುಮಕೂರು ನಗರ ಡಿವೈಎಸ್ ಪಿ ಚಂದ್ರಶೇಖರ್ ರಿಂದ ಪ್ರಾಯೋಗಿಕ ಕುದುರೆ ಪಥ ಸಂಚಲನ ನಡೆಯಲಿದೆ. ತುಮಕೂರಿನ ಎಸ್ಪಿ ಚೇರಿಯ ಡಿಎಆರ್ ಗ್ರೌಂಡ್ ನಿಂದ, ಬಿಹೆಚ್ ರಸ್ತೆ ಮಾರ್ಗವಾಗಿ ಸರ್ಕಾರಿ ಜೂನಿಯರ್ ಕಾಲೇಜು ಆವರಣದವರೆಗೆ ಪ್ರಾಯೋಗಿಕ ಕುದುರೆ ಪಥ ಸಂಚಲನ ನಡೆಯಲಿದೆ. ಇದೇ ಶನಿವಾರ ತುಮಕೂರು ನಗರದಲ್ಲಿ ದಸರಾ ಮೆರವಣಿಗೆ ನಡೆಯಲಿದೆ.