ಕರ್ನಾಟಕ

ಶಿವ ಭಕ್ತನ ಕಥಾಹಂದರ ಹೊಂದಿರುವ "ದೈವ" ಚಿತ್ರದ ವಿಶೇಷ ಪೋಸ್ಟರ್ ರಿಲೀಸ್

"ದೈವ" ಚಿತ್ರದಲ್ಲಿ ಕಾಲಭೈರವನ ಆರಾಧಕನಾಗಿ ಜೋಗಯ್ಯನ ಪಾತ್ರದಲ್ಲಿ ಎರಡು ಗೆಟಪ್ ಗಳಲ್ಲಿ ನಾಯಕ ಅಭಿನಯಿಸಿದ್ದು,. ಶಿವ ಭಕ್ತನ ಕುರಿತಾದ ಕಥಾಹಂದರ ಹೊಂದಿರುವ ಈ ಚಿತ್ರದ ವಿಶೇಷ ಪೋಸ್ಟರ್ ಮಹಾ ಶಿವರಾತ್ರಿಯ ದಿನದಂದೆ ಅನಾವರಣ ಮಾಡಲಾಗಿದೆ.

ಕಲ್ಪವೃಕ್ಷ  ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಶ್ರೀಮತಿ ಜಯಮ್ಮ ಪದ್ಮರಾಜ್ ನಿರ್ಮಿಸಿರುವ,  ಮಂಜುನಾಥ್ ಜಯರಾಜ್ ನಿರ್ದೇಶನದ ಜೊತೆಗೆ ನಾಯಕನಾಗೂ ನಟಿಸಿರುವ "ದೈವ" ಚಿತ್ರದ ವಿಶೇಷ ಪೋಸ್ಟರ್ ಬಿಡುಗಡೆಯಾಗಿದೆ. "ದೈವ" ಚಿತ್ರದಲ್ಲಿ ಕಾಲಭೈರವನ ಆರಾಧಕನಾಗಿ ಜೋಗಯ್ಯನ ಪಾತ್ರದಲ್ಲಿ ಎರಡು ಗೆಟಪ್ ಗಳಲ್ಲಿ ನಾಯಕ  ಅಭಿನಯಿಸಿದ್ದು,. ಶಿವ ಭಕ್ತನ ಕುರಿತಾದ ಕಥಾಹಂದರ ಹೊಂದಿರುವ ಈ ಚಿತ್ರದ ವಿಶೇಷ ಪೋಸ್ಟರ್ ಮಹಾ ಶಿವರಾತ್ರಿಯ ದಿನದಂದೆ ಅನಾವರಣ ಮಾಡಲಾಗಿದೆ.

ಈಗಾಗಲೇ ಚಿತ್ರದ ಚಿತ್ರೀಕರಣ ಮುಗಿದಿದ್ದು ಶಿರಸಿ, ಮುಂಡಗೋಡು, ಯಲ್ಲಾಪುರ, ಗೋಕರ್ಣ, ಶಿವಮೊಗ್ಗ, ಚಿಕ್ಕಮಗಳೂರು ಮುಂತಾದ ಕಡೆ ಚಿತ್ರೀಕರಣ ನಡೆದಿದೆ. ಸದ್ಯದಲ್ಲೇ ಚಿತ್ರ ತೆರೆಗೆ ಬರಲಿದೆ. ವಿಜೇತ್ ಮಂಜಯ್ಯ ಸಂಗೀತವಿರುವ "ದೈವ" ಚಿತ್ರಕ್ಕೆ ಹೆಚ್.ಆರ್. ಸಿದ್ದಾರ್ಥ್ ರವರ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ರವರ ಸಂಕಲನವಿದೆ. ಮಂಜುನಾಥ್ ಜಯರಾಜ್, ಬಾಲರಾಜ್ವಾಡಿ, ಸುರಭಿ, ನೀತು ರಾಯ್, ಅರುಣ್ ಬಚ್ಚನ್, ನಿಶ್ಚಿತಾ ಶೆಟ್ಟಿ, ಮಂಜುರಾಜ್ ಸೂರ್ಯ ಮುಂತಾದವರ ತಾರಾಬಳಗ ಈ ಚಿತ್ರಕ್ಕಿದೆ.