ಕರ್ನಾಟಕ

ಮಳೆಯನ್ನ ಯಾರು ತಡೆಯಲು ಸಾಧ್ಯವಿಲ್ಲ.. ಹಂತ ಹಂತವಾಗಿ ಬೆಂಗಳೂರು ಅಭಿವೃದ್ದಿಯಾಗುತ್ತೆ: ಮಾಜಿ ಸಚಿವ ಬೈರತಿ ಬಸವರಾಜ್

ನಾನು ಕೂಡ ಈ ಕೆಲಸಕ್ಕೆ ಹಿಂದೆ ಸಿದ್ದರಾಮಯ್ಯಗೆ ಒತ್ತಾಯ ಮಾಡಿದ್ವಿ. ಯಡಿಯೂರಪ್ಪ, ಬೊಮ್ಮಾಯಿ ಸರ್ಕಾರದಲ್ಲಿಯೂ ಸ್ಥಳ ಪರಿಶೀಲನೆ ನಡೆಸಿದ್ವಿ. ಕಾಮಗಾರಿ ಬೇಗ ಮುಗಿಸಲು ಅಧಿಕಾರಿಗೆ ಸೂಚನೆ ಕೊಟ್ಟಿದ್ವಿ. ಕೋವಿಡ್ ನಿಂದ 1.5 ವರ್ಷ ಕಾಮಗಾರಿ ಮಾಡಲು ಆಗಲಿಲ್ಲ. ಇವತ್ತು ಆ ಕೆಲಸ ಪೂರ್ಣಗೊಂಡಿರೋದು ಸಂತಸ ಎಂದು ಹೇಳಿದ್ದಾರೆ.

ಮಂಡ್ಯ : ಇಂದು ಕಾವೇರಿ ಐದನೇ ಹಂತದ ಯೋಜನೆ ಲೋಕಾರ್ಪಣೆ ಹಿನ್ನೆಲೆ, ಈ ಕುರಿತು ಮಂಡ್ಯದಲ್ಲಿ ಟಿ.ಕೆ. ಹಳ್ಳಿಯಲ್ಲಿ ಮಾಜಿ ಸಚಿವ ಬೈರತಿ ಬಸವರಾಜ್ ಪ್ರತಿಕ್ರಿಯೆ ನೀಡಿದ್ದು, 110 ಹಳ್ಳಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ಹಾಹಾಕಾರವಿತ್ತು. ಇಂದು ಕಾವೇರಿ ಐದನೇ ಹಂತದ ಯೋಜನೆ ಲೋಕಾರ್ಪಣೆ ಆಗ್ತಿರೋದು ಹೆಮ್ಮೆಯ ವಿಚಾರ. ನಾನು ಕೂಡ ಈ ಕೆಲಸಕ್ಕೆ ಹಿಂದೆ ಸಿದ್ದರಾಮಯ್ಯಗೆ ಒತ್ತಾಯ ಮಾಡಿದ್ವಿ. ಯಡಿಯೂರಪ್ಪ, ಬೊಮ್ಮಾಯಿ ಸರ್ಕಾರದಲ್ಲಿಯೂ ಸ್ಥಳ ಪರಿಶೀಲನೆ ನಡೆಸಿದ್ವಿ. ಕಾಮಗಾರಿ ಬೇಗ ಮುಗಿಸಲು ಅಧಿಕಾರಿಗೆ ಸೂಚನೆ ಕೊಟ್ಟಿದ್ವಿ. ಕೋವಿಡ್ ನಿಂದ 1.5 ವರ್ಷ ಕಾಮಗಾರಿ ಮಾಡಲು ಆಗಲಿಲ್ಲ. ಇವತ್ತು ಆ ಕೆಲಸ ಪೂರ್ಣಗೊಂಡಿರೋದು ಸಂತಸ ಎಂದು ಹೇಳಿದ್ದಾರೆ.

ಈ ಬಗ್ಗೆ ಮಂಡ್ಯದಲ್ಲಿ ಮಾಜಿ ಸಚಿವ ಬೈರತಿ ಬಸವರಾಜ್ ಅವರು ಮಾತನಾಡಿ, ಇದರಲ್ಲಿ ರಾಜಕೀಯ ಬೆರೆಸೋದು ಬೇಡ. ಬೆಂಗಳೂರಿನ ಒಳಿತಿಗಾಗಿ ನಾನು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೀನಿ. ಜನರ ನೀರಿನ ಭವಣೆ ತೀರಿಸಲು ಶಾಸಕರು, ಸರ್ಕಾರ ಬದ್ಧವಾಗಿದ್ದೇವೆ ಎಂದು ತಿಳಿಸಿದ್ದಾರೆ.

ಬೆಂಗಳೂರು ಸಂಸದರು ಗೈರು ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ನಮಗೆ ಕುಡಿಯುವ ನೀರಿನ ಅವಶ್ಯಕತೆ ಇದೆ. ಅದಕ್ಕಾಗಿ 110 ಹಳ್ಳಿಗಳ ವ್ಯಾಪ್ತಿ ಶಾಸಕರು ಬಂದಿದ್ದಾರೆ. ಐದನೇ ಹಂತಕ್ಕೆ ಈ ಯೋಜನೆ ನಿಲ್ಲದಿರಲಿ. ಆರನೇ ಹಂತದ ಯೋಜನೆಯನ್ನು ಕೈಗೆತ್ತಿಕೊಳ್ಳಲಿ ಎಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಬೆಂಗಳೂರಲ್ಲಿ ಮಳೆ ಅವಾಂತರದ ಬಗ್ಗೆ ಮಾತನಾಡಿದ ಅವರು, ನಿನ್ನೆ ಬೆಂಗಳೂರಲ್ಲಿ ಯಥೇಚ್ಛವಾಗಿ ಮಳೆಯಾಗಿದೆ. ಬಹಳಷ್ಟು ಕಡೆ ಜನರಿಗೆ ತೊಂದರೆಯಾಗಿದ್ದು, ನಾವು ಆ ಸ್ಥಳಕ್ಕೆ ಭೇಟಿ ಕೊಟ್ಟಿದ್ದೇವೆ. ಅದಕ್ಕೆ ವಿಷಾಧ ವ್ಯಕ್ತಪಡಿಸುತ್ತೇನೆ. ಮಳೆಯನ್ನ ಯಾರು ತಡೆಯಲು ಸಾಧ್ಯವಿಲ್ಲ. ಹಂತ ಹಂತವಾಗಿ ಬೆಂಗಳೂರು ಅಭಿವೃದ್ದಿಯಾಗುತ್ತೆ. ಡಿಕೆಶಿ ಜೊತೆ ಚರ್ಚೆ ಮಾಡಿದ್ದೇನೆ. ಬೆಂಗಳೂರು ಜನತೇ ನೆಮ್ಮದಿಯಾಗಿ ಇರುವ ವಾತಾವರಣ ನಿರ್ಮಾಣ ಮಾಡ್ತೇವೆ. ಸರ್ಕಾರ ಕೂಡ ಬೇಗ ಹಣ ಬಿಡುಗಡೆ ಮಾಡಬೇಕಿತ್ತು. ಕೆಲವು ಒತ್ತುವರಿ ತೆರವು ಮಾಡಿದ್ರಷ್ಟೆ ಸಮಸ್ಯೆ ಬಗೆಹರಿಸಬಹುದು‌ ಎಂದು ಹೇಳಿದ್ದಾರೆ.