ಸ್ಪೆಷಲ್ ಸ್ಟೋರಿ

ಅಕ್ರಮ ಕಟ್ಟಡಗಳ ತೆರವಿಗೆ ಖುದ್ದು ಬೀದಿಗಿಳಿದ ಬಿಬಿಎಂಪಿ

ಕಟ್ಟಡ ನಕ್ಷೆ ಮಂಜೂರಾತಿ ಅನುಮತಿ ಪಡೆಯದೇ ನಿರ್ಮಾಣವಾಗಿದ್ದ ಅಕ್ರಮ ಕಟ್ಟಡಗಳ ತೆರವಿಗೆ ಮುಂದಾಗಿರುವ ಬಿಬಿಎಂಪಿ ನೋಟಿಸ್ ನೀಡಿದರೂ ಕ್ಯಾರೆ ಎನ್ನದ ಕಟ್ಟಡ ಕಾರ್ಮಿಕರು

ಬೆಂಗಳೂರು - ಉದ್ಯಾನನಗರಿ ಬೆಂಗಳೂರಿನಲ್ಲಿ ಲಕ್ಷಾಂತರ ಕಟ್ಟಡಗಳು ತಲೆಯೆತ್ತಿದೆ. ಬಹುತೇಕ ಕಟ್ಟಡಗಳು ನಕ್ಷೆ ಮಂಜೂರಾತಿ ಅನುಮತಿ ಇಲ್ಲದೇ ತಲೆ ಎತ್ತಿದೆ. ಇದನ್ನ ಗಂಬೀರವಾಗಿ ಪರಿಗಣಿಸಿರುವ ಪಾಲಿಕೆ ಖುದ್ದು ಫೀಲ್ಡ್ಗಿಳಿದು ಕಟ್ಟಡಗಳ ತೆರವಿಗೆ ಕೈ ಹಾಕಿದೆ. 

ದಾಸರಹಳ್ಳಿ ವಲಯದ ಚೊಕ್ಕಸಂದ್ರದಲ್ಲಿ ನಕ್ಷೆ ಮಂಜೂರಾತಿ ಪಡೆಯದೇ ಕಟ್ಟಡ ನಿರ್ಮಾಣವಾಗಿತು. 

6 ಅಂತಸ್ತಿನ ಕಟ್ಟಡ ತೆರವಿಗೆ ಈಗಾಗಲೇ ಮಾಲೀಕರು ನೋಟಿಸ್ ನೀಡಿ ಎಚ್ಚರಿಕೆ ನೀಡಲಾಗಿತು . ಆದರೆ ಮಾಲೀಕರು ಸ್ಪಂದಿಸದ ಕಾರಣ ಖುದ್ದು ಬಿಬಿಎಂಪಿ ಅಗತ್ಯ ಸಲಕರಣೆ ಬಳಸಿಕೊಂಡು ಕಟ್ಟಡ ತೆರವಿಗೆ ಕೈ ಹಾಕಿದೆ.