ಕರ್ನಾಟಕ

ವಿವಾದಕ್ಕೀಡಾದ ಗವಿಸಿದ್ಧೇಶ್ವರ ಶ್ರೀಗಳ ಆಶೀರ್ವಾದ ..!!

ಲಕ್ಷಾಂತರ ಜನ ಭಕ್ತ ಸಮೂಹವನ್ನು ಹೊಂದಿರುವ ಗವಿಮಠದ, ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಅವರ ಆಶೀರ್ವಾದ ವಿವಾದಕ್ಕೀಡಾಗಿದೆ. ಭಕ್ತರೊಬ್ಬರ ಮೇಲೆ ತಮ್ಮ ಪಾದಗಳನ್ನು ಇಟ್ಟು ಆಶೀರ್ವಾದ ಮಾಡುತ್ತಿರುವ ಫೋಟೋ ವೈರಲ್ ಆಗಿದೆ.

ತಮ್ಮ ಭೇಟಿಗೆ ಬಂದ ಭಕ್ತರೊಬ್ಬರ ತಲೆಯ ಮೇಲೆ, ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿಗಳು ತಮ್ಮ ಪಾದ ಇಟ್ಟಿರುವ ಫೋಟೋ ವೈರಲ್ ಆಗಿದೆ. ಈ ಫೋಟೋ ಹೊಸ ವಿವಾದವನ್ನು ಸೃಷ್ಟಿಸಿದೆ.ಸರ್ಕಾರಿ ಶಾಲೆಯೊಂದರ ಮುಖ್ಯ ಶಿಕ್ಷಕರಾದ ವೀರಣ್ಣ ಗಣಾಚಾರಿ ಎಂಬುವರು, ಫೋಟೋವೊಂದನ್ನು ಹಂಚಿಕೊಂಡು  'ಮಕ್ಕಳೊಂದಿಗೆ ಮಗುವಾಗ್ತೀರಿ.. ಹಿರಿಯರೊಂದಿಗೆ ಹೀಗೆಕೆ ಶ್ರೀ ಗಳೇ' ಎಂದು ಪ್ರಶ್ನಿಸಿದ್ದಾರೆ.