ಕರ್ನಾಟಕ

ಮಗಳ ಸಾವಿನಿಂದ ಖಿನ್ನತೆ; ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯನ್ನ ರಕ್ಷಿಸಿದ ಯುವಕರು

ವಿರಾಜಪೇಟೆ ತಾಲ್ಲೂಕಿನ ಬೇತ್ರಿ ಎಂಬಲ್ಲಿ ಪೊನ್ನಂಪೇಟೆ ಎಂ.ಜಿ. ನಗರದ ನಾಗಪ್ಪ ಎಂಬುವರ ಪತ್ನಿ ನಿರ್ಮಲಾ (48) ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದರು.

ಕೊಡಗು : ಬೇತ್ರಿ ಹೊಳೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯನ್ನ ಸ್ಥಳೀಯ ಯುವಕರು ರಕ್ಷಿಸಿದ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ.

ವಿರಾಜಪೇಟೆ ತಾಲ್ಲೂಕಿನ ಬೇತ್ರಿ ಎಂಬಲ್ಲಿ  ಪೊನ್ನಂಪೇಟೆ ಎಂ.ಜಿ. ನಗರದ ನಾಗಪ್ಪ ಎಂಬುವರ ಪತ್ನಿ ನಿರ್ಮಲಾ (48) ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದರು.

ಇತ್ತೀಚಿಗಷ್ಟೇ ನಿರ್ಮಲ ಅವರ ಪುತ್ರಿ ಅನಾರೋಗ್ಯದಿಂದ ಮೃತಪಟ್ಟ ಹಿನ್ನೆಲೆ, ಪುತ್ರಿ ಸಾವಿನಿಂದ ಖಿನ್ನತೆಗೆ ಒಳಗಾಗಿ ಮಹಿಳೆ ಆತ್ಮಹತ್ಯೆಗೆ ಯತ್ನಿದ್ದಾರೆ. ಆದರೆ ಸ್ಥಳದಲ್ಲೇ ಇದ್ದ ಸ್ಥಳಿಯ ಯುವಕರು ನಿರ್ಮಲಾ ಅವರನ್ನ ರಕ್ಷಣೆ ಮಾಡಿದ್ದಾರೆ.