ಕರ್ನಾಟಕ

ಸಾರ್ವಜನಿಕ ಕುಂದುಕೊರತೆ ಸಭೆಗೆ ಹಾಜರಾಗದ RTO ಅಧಿಕಾರಿಗಳಿ ಉಪಲೋಕಾಯುಕ್ತ ತರಾಟೆ

ಮಸ್ಯೆ ಪರಿಹರಿಸದ ಆರ್‌ಟಿಓ ಅಧಿಕಾರಿಗಳನ್ನು ಕರೆದ ಲೋಕಾಯುಕ್ತ ನ್ಯಾ. ವೀರಪ್ಪ ಅಧಿಕಾರಿಗಳ ನಿರ್ಲಕ್ಷ್ಯ ಕಂಡು ಕೆಂಡಾಮಂಡರಾಗಿದ್ದಾರೆ.

ತುಮಕೂರು : ಸಾರ್ವಜನಿಕರ ಕುಂದು ಕೊರತೆ ಸಭೆಗೆ ಹಾಜರಾಗದ ಆರ್‌ಟಿ‌ಓ ಅಧಿಕಾರಿಗಳನ್ನ ಉಪಲೋಕಾಯುಕ್ತ ನ್ಯಾ ಬಿ.ವೀರಪ್ಪ ತರಾಟೆಗೆ ತೆಗೆದುಕೊಂಡಿದ್ದಾರೆ. ತುಮಕೂರು ನಗರದ ಗುಬ್ಬಿ ವೀರಣ್ಣ ರಂಗ ಮಂದಿರದಲ್ಲಿ ನಡೆಯುತ್ತಿರುವ ಸಭೆಯಲ್ಲಿ ಸಮಯಕ್ಕೆ ಸರಿಯಾಗಿ ಕೋರ್ಟ್‌ಗೆ ಹಾಜರಾಗದ ಅಧಿಕಾರಿಗಳಿಗೆ ಉಪಲೋಕಾಯುಕ್ತರು ಚಳಿ ಬಿಡಿಸಿದ್ದಾರೆ. 

ಆರ್ ಡಿಓ ಇಲಾಖೆಗೆ ದೂರು ನೀಡಿದರು ಕೆಲಸವಾಗದ ಹಿನ್ನಲೆ, ಇಂದು ಲೋಕಾಯುಕ್ತರಿಗೆ ಸಾರ್ವಜನಿಕ ದೂರು ನೀಡಲು ನರಸಿಂಹ ಮೂರ್ತಿ ಎಂಬುವವರು ಬಂದಿದ್ದರು. ಹೀಗಾಗಿ ಸಮಸ್ಯೆ ಪರಿಹರಿಸದ ಆರ್‌ಟಿಓ ಅಧಿಕಾರಿಗಳನ್ನು ಕರೆದ ಲೋಕಾಯುಕ್ತ ನ್ಯಾ. ವೀರಪ್ಪ  ಅಧಿಕಾರಿಗಳ ನಿರ್ಲಕ್ಷ್ಯ ಕಂಡು ಕೆಂಡಾಮಂಡರಾಗಿದ್ದಾರೆ.