ವೈರಲ್

ಬೆಳೆ ರಕ್ಷಣೆಗೆ ಹೀರೋಯಿನ್ ಗಳ ಕಟೌಟ್ ಹಾಕಿದ ರೈತರು..!

ಬೆಳೆ ನೋಡಬೇಕು ಅಂತ ಜಮೀನಿಗೆ ಹೋದವರ ಕಣ್ಣು ಕೂಡ ಬೆಳೆ ಮೇಲೆ ಬೀಳೋದಿಲ್ಲ. ಅರೆ, ಅದೇನಪ್ಪ ರೈತನ ಪ್ಲಾನ್ ಅಂತೀರಾ ಇಲ್ಲಿದೆ ನೋಡಿ ಡಿಟೇಲ್ಸ್. ಹೊಲಕ್ಕೆ ದೃಷ್ಟಿಯಾಗಬಾರದೆಂದು ರೈತನ ಮಾಸ್ಟರ್ ಪ್ಲಾನ್ ಮಾಡಿದ್ದು, ಹಿರೊಯಿನ್ ಭಾವಚಿತ್ರದ ಕಟೌಟ್ ಹಾಕಿ ಕೆಟ್ಟ ದೃಷ್ಟಿಯಿಂದ ಕಾವಲು ಮಾಡಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಮಮಟಗೇರಿ ಗ್ರಾಮದ ಮಹಾಂತೇಶ ಹಾಗೂ ಮಂಜುನಾಥ ತಿಮ್ಮನಾಯ್ಕರ್ ಎಂಬ ಸಹೋದರ ಎಂಬ ರೈತರು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆಗೆ ಯಾರ ದೃಷ್ಟಿ ಬೀಳಬಾರದೆಂದು ಕನ್ನಡದ ಖ್ಯಾತ ನಟಿಯರ ಫೋಟೋ ಹಾಕಿದ್ದಾರೆ. ಬೆಳೆ ಬದಲಿಗಳಿಗೆ ರಾಧಿಕಾ ಪಂಡಿತ್, ರಚಿತಾ ರಾಮ್, ಅಮೂಲ್ಯಾ ಭಾವಚಿತ್ರ ಹಾಕಿದ್ರೆ ಜನರ ದೃಷ್ಟಿ ನಟಿಯರ ಮೇಲೆ ಬಿದ್ದು ಬೆಳೆ ರಕ್ಷಣೆ ಆಗುತ್ತೆ ಅಂತ ಪ್ಲಾನ್ ಮಾಡಿದ್ದಾರೆ. ಕಟೌಟ್ ಗೆ 1200 ಖರ್ಚು ಮಾಡಿದ್ದಾರಂತೆ. ಮೊದಲು ರೋಗಗಳ ಕಾಟ, ಜನರ ದೃಷ್ಟಿ ತಾಕಿ ಬೆಳೆ ಹಾಳಾಗ್ತಿತ್ತು. ಈಗ ನಾಯಕಿಯರ ಪೊಟೊ ಹಾಕಿದ ನಂತರ ಬೆಳೆ ಹಾಳಾಗಿಲ್ಲ ಅಂತಿದ್ದಾರೆ ಈ ಸಹೋದರರು.

ಜಮೀನಿಗೆ ಕಣ್ಣು ಬೀಳಬಾರದು ಅಂತಾ ಹೊಲಕ್ಕೆ ನಟಿಯರ ಫೋಟೋ ಹಾಕಿದ ರೈತ

ಹೌದು, ಬೆಳೆ ನೋಡಬೇಕು ಅಂತ ಜಮೀನಿಗೆ ಹೋದವರ ಕಣ್ಣು ಕೂಡ ಬೆಳೆ ಮೇಲೆ ಬೀಳೋದಿಲ್ಲ. ಅರೆ, ಅದೇನಪ್ಪ ರೈತನ ಪ್ಲಾನ್ ಅಂತೀರಾ ಇಲ್ಲಿದೆ ನೋಡಿ ಡಿಟೇಲ್ಸ್. ಹೊಲಕ್ಕೆ ದೃಷ್ಟಿಯಾಗಬಾರದೆಂದು ರೈತನ ಮಾಸ್ಟರ್ ಪ್ಲಾನ್ ಮಾಡಿದ್ದು, ಹಿರೊಯಿನ್ ಭಾವಚಿತ್ರದ ಕಟೌಟ್ ಹಾಕಿ ಕೆಟ್ಟ ದೃಷ್ಟಿಯಿಂದ ಕಾವಲು ಮಾಡಿದ್ದಾರೆ.

ಹೌದು ಸಾಮಾನ್ಯವಾಗಿ ಸಿನಿಮಾ ಹೀರೋ, ಹೀರೋಯಿನ್ ಗಳ ಫೋಟೋಗಳನ್ನ ಅಭಿಮಾನಿಗಳು ತಮ್ಮ ವಾಹನಗಳ ಮೇಲೆ ಹಾಕಿಸೋದು ಕಾಮನ್. ಆದ್ರೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಮಮಟಗೇರಿ ಗ್ರಾಮದ ಮಹಾಂತೇಶ ಹಾಗೂ ಮಂಜುನಾಥ ತಿಮ್ಮನಾಯ್ಕರ್ ಎಂಬ ಸಹೋದರರು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆ ರಕ್ಷಣೆಗೆ ಹೀರೋಯಿನ್ ಗಳ ಫೋಟೋಗಳನ್ನು ಬಳಸಿಕೊಂಡು ವಿನೂತನ ಪ್ರಯತ್ನಕ್ಕೆ ಮುಂದಾಗಿದ್ದಾರೆ‌. 

ಈ ರೈತ ಸಹೋದರರು ಒಟ್ಟು 5 ಎಕರೆ ಜಮೀನಿನಲ್ಲಿ ಮೂರು ಎಕರೆಯಲ್ಲಿ  ಕಬ್ಬು ಬೆಳೆದಿದ್ದು, ಎರಡು ಎಕರೆಯಲ್ಲಿ ತರಕಾರಿ ಬೆಳೆಗಳಾದ ಬದನೆಕಾಯಿ, ಮೆಣಸಿನಕಾಯಿ ಬೆಳೆಯುತ್ತಾರೆ. ಆರಂಭದಲ್ಲಿ ಬೆಳೆಗಳು ಚೆನ್ನಾಗಿ ಬೆಳೆದರೂ ಫಸಲು ಕೊಡೋ ಸಮಯಕ್ಕೆ ಎಲೆ ಉದುರಿ ಒಣಗಿ ಹಾಳಾಗ್ತಿತ್ತು. ರಸ್ತೆಯಲ್ಲಿ ಓಡಾಡುವ ಪ್ರಯಾಣಿಕರು, ವಾಹನ ಸವಾರರ ಕೆಟ್ಟ ದೃಷ್ಟಿಯಿಂದ ಬೆಳೆ ಹಾಳಾಗ್ತಿದೆ ಅಂತ ತಿಳಿದು, ಹೊಲದಲ್ಲಿ ಬಿದಿರು ಮತ್ತು ಮಡಿಕೆಗಳಿಂದ ಮಾಡಿದ ದೃಷ್ಟಿಗೊಂಬೆಗಳನ್ನ ಹಾಕಿ, ಬೆಳೆ ರಕ್ಷಣೆಗೆ ಪ್ರಯೋಗ ಮಾಡಿದ್ದಾರೆ. ಆದ್ರೆ ಅದು ಪ್ರಯೋಜನ ಆಗಿಲ್ಲವಂತೆ. ಹೀಗಾಗಿ ಕೆಟ್ಟ ದೃಷ್ಟಿಯಿಂದ ಬೆಳೆ ರಕ್ಷಿಸೋದು ಹೇಗೆ ಅಂತ ಯೋಚನೆ ಬಂದಾಗ. ಮೊದಲಿಗೆ ರಾಜಕೀಯ ನಾಯಕರ ಭಾವಚಿತ್ರಗಳನ್ನ ಹಾಕಬೇಕು ಅಂದುಕೊಂಡಿದ್ದರಂತೆ. ಕನ್ನಡದ ಖ್ಯಾತ ನಟಿಯರ ಭಾವಚಿತ್ರ ಹಾಕಿದ್ರೆ ಜನರ ದೃಷ್ಟಿ ನಟಿಯರ ಮೇಲೆ ಬಿದ್ದು ಬೆಳೆ ರಕ್ಷಣೆ ಆಗುತ್ತೆ ಅಂತ ಪ್ಲಾನ್ ಮಾಡಿದ್ದಾರೆ.