ಕರ್ನಾಟಕ

ಕೊನೆಗೂ ಕಿಯೋನಿಕ್ಸ್ ಗೊಂದಲಕ್ಕೆ ಎಂಟ್ರಿಯಾದ ಸಿಎಂ ಸಿದ್ದರಾಮಯ್ಯ..

ತನಿಖೆ ಪ್ರಗತಿಯಲ್ಲಿರುವಾಗಲೇ ಬಿಲ್ ಪಾವತಿಗಾಗಿ ಕಿಯೋನಿಕ್ಸ್ ವೆಂಡರ್ಸ್ ಪಟ್ಟುಹಿಡಿದಿದ್ದಾರೆ. ಈ ಹಿನ್ನೆಲೆ ಸಿಎಂ ಸಿದ್ದರಾಮಯ್ಯ ಸಭೆ ನಡೆಸಲಿದ್ದಾರೆ.

ಕಿಯೋನಿಕ್ಸ್ ಸಂಸ್ಥೆಯ ಗೊಂದಲಕ್ಕೆ ಸಿಎಂ ಸಿದ್ದರಾಮಯ್ಯ ಎಂಟ್ರಿಯಾಗಿದ್ದಾರೆ. ಇಂದು ಸಿಎಂ ಸರ್ಕಾರಿ ನಿವಾಸ ಕಾವೇರಿಯಲ್ಲಿ ಬೆಳಿಗ್ಗೆ 11:30ಕ್ಕೆ  ಕಿಯೋನಿಕ್ಸ್ ಸಂಸ್ಥೆಯ ಕುರಿತು ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ, ಕಿಯೋನಿಕ್ಸ್ ಸಂಸ್ಥೆ ಅಧ್ಯಕ್ಷ ಶಾಸಕ ಶರತ್ ಬಚ್ಚೇಗೌಡ ಮತ್ತು ಅಧಿಕಾರಿಗಳು ಭಾಗಿಯಾಗುವ ಸಾಧ್ಯತೆ ಇದೆ. 

ಕಿಯೋನಿಕ್ಸ್ ವೆಂಡರ್ ಅಸೋಸಿಯೇಷನ್‌ನಿಂದ ಬಾಕಿ  ಬಿಲ್ ಪಾವತಿಗೆ ಆಗ್ರಹ ಹಿನ್ನೆಲೆ, ಈ ಬಗ್ಗೆ ಸಿಎಂ ಸಭೆಯಲ್ಲಿ ಸುಧೀರ್ಘ ಚರ್ಚೆ ಮಾಡಿ  ಮಾಹಿತಿಯನ್ನ ಪಡೆಯಲಿದ್ದಾರೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಸರ್ಕಾರ ಬಿಲ್ ತಡೆ ಹಿಡಿದಿತ್ತು. ಈಗಾಗಲೇ ತನಿಖೆಗಾಗಿ ಮಹೇಶ್ವರ್ ರಾವ್ ಕಮಿಟಿಯನ್ನ ರಚಿಸಿದೆ. ಆದರೆ ತನಿಖೆ ಪ್ರಗತಿಯಲ್ಲಿರುವಾಗಲೇ ಬಿಲ್ ಪಾವತಿಗಾಗಿ  ಕಿಯೋನಿಕ್ಸ್ ವೆಂಡರ್ಸ್ ಪಟ್ಟುಹಿಡಿದಿದ್ದಾರೆ. ಈ ಹಿನ್ನೆಲೆ ಸಿಎಂ ಸಿದ್ದರಾಮಯ್ಯ ಸಭೆ ನಡೆಸಲಿದ್ದಾರೆ.