ವೈರಲ್

ಗೃಹಲಕ್ಷ್ಮಿ ಹಣಕ್ಕಾಗಿ ಬಿತ್ತು ಹೆಣ : ಕರೆಂಟ್ ಶಾಕ್ ಕೊಟ್ಟು ಪತ್ನಿಯ ಕೊಲೆ

ಕೊಲೆ ಆರೋಪಿ ಅಣ್ಣಪ್ಪ ಎಂಬ ವ್ಯಕ್ತಿ ಪತ್ನಿಯನ್ನ ವಿದ್ಯುತ್ ತಂತಿಯ ಮೇಲೆ ನೂಕಿ ಕೊಲೆ ಮಾಡಿದ್ದಾನೆ ಎಂದು ಮೃತಳ ಸಹೋದರ ಸತೀಶ್ ಎಂಬವರು ಆರೋಪಿಸಿದ್ದಾರೆ. ಕೆಲಸ ಇಲ್ಲದೇ ಹಣಕ್ಕೆ ಪರದಾಡುತ್ತಿದ್ದ ಅಣ್ಣಪ್ಪ ಗೃಹಲಕ್ಷ್ಮಿ ಹಣ ಕೊಡುವಂತೆ ಪತ್ನಿಯನ್ನು ಪೀಡಿಸುತ್ತಿದ್ದ.

ದಾವಣಗೆರೆ : ಗೃಹಲಕ್ಷ್ಮಿ ಯೋಜನೆ ಹಣಕ್ಕಾಗಿ ದಂಪತಿಗಳ ನಡುವೆ ಜಗಳ ಶುರುವಾಗಿದ್ದು ಕೊಲೆಯಲ್ಲಿ ಅಂತ್ಯವಾಗಿದೆ. ಈ ಘಟನೆ  ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಉಜ್ಜಪ್ಪರವಡೇರಹಳ್ಳಿಯಲ್ಲಿ ನಡೆದಿದೆ. ಗೃಹಲಕ್ಷ್ಮಿ ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ಪತಿರಾಯ ಪತ್ನಿಯನ್ನೇ ಕೊಲೆ ಮಾಡಿದ್ದಾನೆ. ಸತ್ಯಮ್ಮ (40) ಎಂಬ ಮೃತ ಮಹಿಳೆ.

ಕೊಲೆ ಆರೋಪಿ ಅಣ್ಣಪ್ಪ ಎಂಬ ವ್ಯಕ್ತಿ ಪತ್ನಿಯನ್ನ ವಿದ್ಯುತ್ ತಂತಿಯ ಮೇಲೆ ನೂಕಿ ಕೊಲೆ ಮಾಡಿದ್ದಾನೆ ಎಂದು ಮೃತಳ ಸಹೋದರ ಸತೀಶ್ ಎಂಬವರು ಆರೋಪಿಸಿದ್ದಾರೆ. ಕೆಲಸ ಇಲ್ಲದೇ ಹಣಕ್ಕೆ ಪರದಾಡುತ್ತಿದ್ದ ಅಣ್ಣಪ್ಪ ಗೃಹಲಕ್ಷ್ಮಿ ಹಣ ಕೊಡುವಂತೆ ಪತ್ನಿಯನ್ನು ಪೀಡಿಸುತ್ತಿದ್ದ. ಹಣ ತರಲು ಮಗನೊಂದಿಗೆ ಬ್ಯಾಂಕ್‌ ಗೆ ಹೋದ ಸತ್ಯಮ್ಮನನ್ನು ಹಿಂಬಾಲಿಸಿದ್ದ ಅಣ್ಣಪ್ಪ, ಹಣಕ್ಕಾಗಿ ಪತ್ನಿ ಜತೆ ಜಗಳವಾಡಿ, ಹಲ್ಲೆ ಮಾಡಿದ್ದ. ಬಳಿಕ ಪತ್ನಿಯನ್ನು ಊರಿಗೆ ಬಿಡುವುದಾಗಿ ಬೈಕ್‌ ನಲ್ಲಿ ಕರೆದುಕೊಂಡು ಹೋಗಿ ಉಜ್ಜಪ್ಪರವಡೇರಹಳ್ಳಿ ಸಮೀಪದ ನಿರ್ಜನ ಪ್ರದೇಶದಲ್ಲಿ ಬೈಕ್‌ ನಿಂದ ಇಳಿಸಿ ಹಲ್ಲೆ ನಡೆಸಿ ಕೊಲೆ‌‌ ಮಾಡಿದ್ದಾನೆ. ಅಲ್ಲದೆ ಕರೆಂಟ್ ಶಾಕ್ ಹೊಡೆದಿದೆ ಎಂದು ಕಥೆ ಕಟ್ಟಿದ್ದ. ಮೃತದೇಹವನ್ನು ದಾವಣಗೆರೆ‌ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಈ ಸಂಬಂಧ ಬಿಳಿಚೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.