ಕರ್ನಾಟಕ

ಕಲ್ಪತರು ನಾಡಲ್ಲಿ ಮಳೆಯಬ್ಬರ; ಸಿಡಿಲು ಬಡಿದು 17 ಮೇಕೆಗಳು ಸಾ*ವು

ರೈತ ವರದರಾಜು, ಲಕ್ಕಣ್ಣ, ಗೋವಿಂದರಾಜು ಮತ್ತು ಜಯಲಕ್ಷ್ಮಮ್ಮ ಗೆ ಸೇರಿದ ಕುರಿಗಳು ಮಳೆಗೆ ಬಲಿಯಾಗಿದ್ದು, ಜೀವನಕ್ಕೆ ಆಧಾರವಾಗಿದ್ದ ಕುರಿಗಳನ್ನ ಕಳೆದುಕೊಂಡು ಕುಟುಂಬ ಕಂಗಾಲಾಗಿದೆ.

ತುಮಕೂರು : ಗುಡುಗು ಸಹಿತ ಸುರಿದ ಮಳೆಗೆ ತುಮಕೂರಿನಲ್ಲಿ ಭಾರಿ ಅವಾಂತರಗಳೇ ಸೃಷ್ಟಿಯಾಗಿವೆ. ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ರಾಮಸಾಗರ ಗ್ರಾಮದ ಹೊರವಲಯದಲ್ಲಿ ಸಿಡಿಲು ಬಡಿದು ಮೇಕೆ,‌ ಕುರಿಗಳು ಸಾವನ್ನಪ್ಪಿವೆ. 3 ಲಕ್ಷ ಬೆಲೆಬಾಳುವ 17 ಮೇಕೆ, ಕುರಿಗಳು ಸಾವನ್ನಪ್ಪಿದು, ರೈತ ಕಂಗಾಲಾಗಿದ್ದಾನೆ. 

ರೈತ ವರದರಾಜು, ಲಕ್ಕಣ್ಣ, ಗೋವಿಂದರಾಜು ಮತ್ತು ಜಯಲಕ್ಷ್ಮಮ್ಮ ಗೆ ಸೇರಿದ ಕುರಿಗಳು ಮಳೆಗೆ ಬಲಿಯಾಗಿದ್ದು, ಜೀವನಕ್ಕೆ ಆಧಾರವಾಗಿದ್ದ ಕುರಿಗಳನ್ನ ಕಳೆದುಕೊಂಡು ಕುಟುಂಬ ಕಂಗಾಲಾಗಿದೆ.