ಕರ್ನಾಟಕ

ವರದಕ್ಷಿಣೆ ಕಿರುಕುಳ ಆರೋಪ, ಗೃಹಿಣಿ ಆತ್ಮಹತ್ಯೆ

ಕಳೆದ 12 ವರ್ಷಗಳ ಹಿಂದೆ ಪ್ರಸನ್ನ ಎಂಬುವರನ್ನು ವಿವಾಹವಾಗಿದ್ದ ಪ್ರೇಮಾ, ಆತ್ಮಹತ್ಯೆಗೆ ಶರಣಾಗಿದ್ದಾರೆ. ಪತಿಯ ಕುಟುಂಬಸ್ಥರ ವಿರುದ್ಧ ಪ್ರೇಮಾ ಸಹೋದರ, ವರದಕ್ಷಿಣೆ ಕಿರುಕುಳ ಆರೋಪದಡಿ ದೂರು ದಾಖಲಿಸಿದ್ದಾರೆ.

ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಕಬ್ಬಳ್ಳಿ ಗ್ರಾಮದಲ್ಲಿ ನಡೆದಿದೆ.  32 ವರ್ಷದ ಪ್ರೇಮಾ ಆತ್ಮಹತ್ಯೆಗೆ ಶರಣಾದ ದುರ್ದೈವಿ ಎನ್ನಲಾಗಿದ್ದು, ಗಂಡನ ಮನೆಯವರ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ ಕೇಳಿ ಬರುತ್ತಿದೆ.

ಹೆಚ್.ಡಿ ಕೋಟೆಯ ಪ್ರಸನ್ನ ಎಂಬ ವ್ಯಕ್ತಿ ಜೊತೆ, ಕಳೆದೆ 12 ವರ್ಷಗಳ ಹಿಂದೆ ಪ್ರೇಮಾ ವಿವಾಹವಾಗಿತ್ತು. ಇದೀಗ ಗಂಡ, ಅತ್ತೆ, ಮಾವ, ನಾದಿನಿಯರಿಂದ ವರದಕ್ಷಿಣೆ ಕಿರುಕುಳ ನೀಡಲಾಗಿದೆ ಎಂಬ ಆರೋಪ ಕೇಳಿಬರುತ್ತಿದೆ. ಈ ಬಗ್ಗೆ ಮೃತಳ ಸಹೋದರನಿಂದ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.