ಕರ್ನಾಟಕ
ಕನ್ನಡದ ಹೆಮ್ಮೆಯ ಸಾಧಕರಿಗೆ ದುಬೈನಲ್ಲಿ ಅಂತರರಾಷ್ಟ್ರೀಯ ಗಂಧದ ಗುಡಿ ಪ್ರಶಸ್ತಿ
ಇಡೀ ಕಾರ್ಯಕ್ರಮವನ್ನ ದೊಡ್ಡ ಮಟ್ಟದಲ್ಲಿ ಆಯೋಜಿಸಲಾಗಿದ್ದು, ಇಷ್ಟು ದೊಡ್ಡ ವೇದಿಕೆಗೆ ಸಾರಥಿಯಾಗಿ ಕನ್ನಡದ ಹೆಸರಾಂತ ನಿರೂಪಕಿ ಅನುಶ್ರೀ ಹಾಗೂ ಕನ್ನಡದ ಹೆಸರಾಂತ ನಾಯಕ ವಿಜಯ್ ರಾಘವೇಂದ್ರ ನಿರೂಪಕರಾಗಿ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ಕನ್ನಡ ನುಡಿಯ ತಂಪು, ಗಂಧದ ಗುಡಿಯ ಕಂಪನ್ನ ದುಬೈ ನಲ್ಲಿ ಮೆರೆಸೋಕೆ ಅಚ್ಚ ಕನ್ನಡದ ತಂಡ overseas entertainment, G KD investments LLC ಅವರ ಸಹಕಾರದೊಂದಿಗೆ ಅಚ್ಚ ಕನ್ನಡದ, ಹೆಮ್ಮೆಯ ಹಿರಿಮೆಯ ಕಾರ್ಯಕ್ರಮ “ಅಂತರಾಷ್ಟ್ರೀಯ ಗಂಧದ ಗುಡಿ ಪ್ರಶಸ್ತಿ - 2025” ಫೆಬ್ರವರಿ 16 ರಂದು ದುಬೈನಲ್ಲಿ ಅದ್ದೂರಿಯಾಗಿ ನಡೆಯಲಿದೆ.
ಪತ್ರಿಕಾಗೋಷ್ಠಿಯಲ್ಲಿ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ನಟಿ ತಾರಾ ಅನುರಾಧ, ನಟ ಸುಚೇಂದ್ರ ಪ್ರಸಾದ್, ನಟ ವಿಜಯ ರಾಘವೇಂದ್ರ ಹಾಗೂ ಸಮಾರಂಭದ ಆಯೋಜಕರಾದ ಪೀಟರ್ ಉಪಸ್ಥಿತರಿದ್ದರು. ಕಾರ್ಯಕ್ರಮದ ಮುಖ್ಯ ಆತಿಥ್ಯವನ್ನ ಜನಪ್ರಿಯ ನಾಯಕರಾದ ಶಿವರಾಜ್ ತಂಗಡಗಿ, ಡಿಕೆ ಸುರೇಶ್, ಸಂಸದ ಹಾಗೂ ರಾಜ ವಂಶಸ್ಥರಾದ ಶ್ರೀ ಯದುವೀರ್ ಕೃಷ್ಣರಾಜ ಒಡೆಯರ್, ಶ್ರೀಮತಿ ಅಶ್ವಿನಿ ಪುನೀತ್ ರಾಜಕುಮಾರ್ , ಆರತಿ ಕೃಷ್ಣ ಹಾಗು ಕೆಪಿ ಶ್ರೀಕಾಂತ್ ವಹಿಸಲಿದ್ದಾರೆ. ಇಡೀ ಕಾರ್ಯಕ್ರಮವನ್ನ ದೊಡ್ಡ ಮಟ್ಟದಲ್ಲಿ ಆಯೋಜಿಸಲಾಗಿದ್ದು, ಇಷ್ಟು ದೊಡ್ಡ ವೇದಿಕೆಗೆ ಸಾರಥಿಯಾಗಿ ಕನ್ನಡದ ಹೆಸರಾಂತ ನಿರೂಪಕಿ ಅನುಶ್ರೀ ಹಾಗೂ ಕನ್ನಡದ ಹೆಸರಾಂತ ನಾಯಕ ವಿಜಯ್ ರಾಘವೇಂದ್ರ ನಿರೂಪಕರಾಗಿ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ಚಿತ್ರರಂಗದಲ್ಲಿನ ಸಾಧನೆಗೆ, ಕ್ರೀಡಾ ಕ್ಷೇತ್ರದಲ್ಲಿನ ಸಾಧನೆಗೆ, ಸಾಹಿತ್ಯದಲ್ಲಿ, ಪತ್ರಿಕೋದ್ಯಮದಲ್ಲಿ, ವೈದ್ಯಕೀಯ ಸೇವೆ, ಶಿಕ್ಷಣ, ಕಾನೂನು ಹೇಗೆ ಹಲವು ಕ್ಷೇತ್ರದ ಸಾಧಕರಿಗೆ ವಿಶೇಷ ಗೌರವ ಸನ್ಮಾನ ನೀಡಿ ಗೌರವಿಸಲಾಗುವುದು. ಈ ಬಾರಿ ಜೀವಮಾನದ ಶ್ರೇಷ್ಠ ಸಾಧನೆ ಪ್ರಶಸ್ತಿಯನ್ನು ನಟಿ ತಾರಾ ಅನುರಾಧ ಅವರಿಗೆ ನೀಡಲಾಗುತ್ತಿದೆ. ಇನ್ನು ಅಂದು ಪ್ರಶಸ್ತಿ ಪ್ರದಾನ ಸಮಾರಂಭದ ನಂತರ ಹೆಸರಾಂತ ಸಂಗೀತ ನಿರ್ದೇಶಕ ವಿ ಹರಿಕೃಷ್ಣ ಮತ್ತು ತಂಡದವರಿಂದ ಕನ್ನಡದ ಸುಪ್ರಸಿದ್ಧ ಹಾಡುಗಳ ಸಂಗೀತ ರಸಸಂಜೆ ಕಾರ್ಯಕ್ರಮವಿದೆ. ಇನ್ನು ಈ ಕಾರ್ಯಕ್ರಮದ ಉದ್ದೇಶ ಚೆನ್ನಾಗಿದ್ದು, ಕನ್ನಡ ಶಾಲೆಗಳನ್ನು ಜೀರ್ಣೋದ್ಧಾರ ಮುಖ್ಯ ಉದ್ದೇಶವಾಗಿದೆ..