ವೈರಲ್

KRS ಡ್ಯಾಂ ಒಳ ಹರಿವು ಹೆಚ್ಚಳ.. ವರ್ಷದಲ್ಲಿ 3ನೇ ಬಾರಿ ಭರ್ತಿಯಾದ ಕನ್ನಂಬಾಡಿ ಅಣೆಕಟ್ಟೆ..!

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ KRS ಡ್ಯಾಂನಲ್ಲಿ ಮತ್ತೆ ಒಳ ಹರಿವಿನ ನೀರಿನ ಮಟ್ಟ ಮತ್ತೆ ಹೆಚ್ಚಳವಾಗಿದ್ದು, ಡ್ಯಾಂ ನೀರಿನ‌ ಮಟ್ಟ ಮತ್ತೆ ಏರಿಕೆಯಿಂದ ಮಂಡ್ಯ ರೈತರಲ್ಲಿ ಸಂಭ್ರಮ ಮನೆ ಮಾಡಿದೆ. ಕೆಲವು ದಿನಗಳಿಂದ ‌ಸುರಿಯುತ್ತಿರುವ‌ ಮಳೆಯಿಂದಾಗಿ‌ ಡ್ಯಾಂ ಸಂಪೂರ್ಣ ಭರ್ತಿಯಾಗಿದೆ.

ಮಂಡ್ಯ : ಕಾವೇರಿ ಜಲಾನಯನ ‌ಪ್ರದೇಶದಲ್ಲೂ ಹಿಂಗಾರು ಮಳೆ‌‌ಯಾಗುತ್ತಿದೆ. KRS ಡ್ಯಾಂನ ಒಳ ಹರಿವಿನಲ್ಲಿ‌ ಮತ್ತೆ ನೀರಿನ  ಮಟ್ಟ ಹೆಚ್ಚಳವಾಗಿದೆ. ವರ್ಷದಲ್ಲಿ 3ನೇ ಬಾರಿಗೆ ಕನ್ನಂಬಾಡಿ ಅಣೆಕಟ್ಟೆ ಸಂಪೂರ್ಣ ಭರ್ತಿಯಾಗಿದೆ. ಡ್ಯಾಂ ನೀರಿನ ಮಟ್ಟ 124.80 ಅಡಿ ತಲುಪಿದೆ. 

Karnataka Dam Water Level: ಆ.8ರ ರಾಜ್ಯದ ಪ್ರಮುಖ ಡ್ಯಾಂಗಳ ನೀರಿನ ಮಟ್ಟ, ಇಲ್ಲಿದೆ  ಮಾಹಿತಿ - Kannada News | Karnataka Dam Water Level Today Karnataka Major  Dams Alamatti, Tungabadra, KRS dam Water Level details august

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ KRS ಡ್ಯಾಂನಲ್ಲಿ ಮತ್ತೆ ಒಳ ಹರಿವಿನ ನೀರಿನ ಮಟ್ಟ ಮತ್ತೆ ಹೆಚ್ಚಳವಾಗಿದ್ದು, ಡ್ಯಾಂ ನೀರಿನ‌ ಮಟ್ಟ ಮತ್ತೆ ಏರಿಕೆಯಿಂದ ಮಂಡ್ಯ ರೈತರಲ್ಲಿ ಸಂಭ್ರಮ ಮನೆ ಮಾಡಿದೆ. ಕೆಲವು ದಿನಗಳಿಂದ ‌ಸುರಿಯುತ್ತಿರುವ‌ ಮಳೆಯಿಂದಾಗಿ‌ ಡ್ಯಾಂ ಸಂಪೂರ್ಣ ಭರ್ತಿಯಾಗಿದೆ. ಒಳ‌ ಹರಿವು 8547 ಕ್ಯೂಸೆಕ್ ಗೆ ಏರಿಕೆಯಾಗಿದೆ. ಕಳೆದ ಜುಲೈ 27ರಂದು‌ KRS ಡ್ಯಾಂ ಸಂಪೂರ್ಣ ಭರ್ತಿಯಾಗಿದೆ. ಇದೀಗ ಮತ್ತೆ ಸಂಪೂರ್ಣ ಭರ್ತಿಯಾಗಿ ಕಣ್ಮನ ಸೆಳೆಯುತ್ತಿದೆ.

KRS ಡ್ಯಾಂ ಸಂಪೂರ್ಣ ‌ಭರ್ತಿಯಾಗಿರುವ ಹಿನ್ನೆಲೆಯಲ್ಲಿ  8,287 ಕ್ಯೂಸೆಕ್ ನೀರು ಬಿಡುಗಡೆಯಾಗಿದ್ದು, ಮತ್ತೊಂದೆಡೆ ಮಂಡ್ಯ ಜಿಲ್ಲೆಯ ಅನ್ನದಾತರಲ್ಲೂ  ಸಂಭ್ರಮ ಮನೆ ಮಾಡಿದೆ. ರೈತರು ಬೇಸಿಗೆ ಬೆಳೆಗೂ ನೀರಿನ ಸಮಸ್ಯೆ ಆಗೋದಿಲ್ಲ ಎಂಬ ಖುಷಿಯಲ್ಲಿದ್ದಾರೆ. ಕೃಷಿಯ ಜೊತೆಗೆ ಬೇಸಿಗೆಯಲ್ಲಿ‌ ಬೆಂಗಳೂರು ಜನರಿಗೂ ಕುಡಿಯುವ ನೀರಿನ ‌ಸಮಸ್ಯೆ ಇರಲ್ಲ ಎಂಬ ನೆಮ್ಮದಿ ಇದೆ.