ಕರ್ನಾಟಕ

ರೈಲ್ವೆ ಹಳಿ ಮೇಲೆ ಭೂಕುಸಿತ.. ರೈಲು ಸಂಚಾರ ದಿಢೀರ್ ಸ್ಥಗಿತ

ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನಲ್ಲಿ ಕಳೆದ ಬಾರಿ ಮಣ್ಣು ಕುಸಿದಿದ್ದ ಸ್ಥಳದಲ್ಲೇ, ಭೂಕುಸಿತ ಸಂಭವಿಸಿ ಅವಾಂತರ ಸೃಷ್ಟಿಯಾಗಿದೆ. ಮಾರ್ಗಮಧ್ಯೆಯೇ ರೈಲು ಸ್ಥಗಿತಗೊಂಡು ಪ್ರಯಾಣಿಕರು ಪರದಾಡುವಂತಾಗಿದೆ.

ರೈಲ್ವೆ ಹಳಿ ಮೇಲೆ ಭೂಕುಸಿತ ಸಂಭವಿಸಿ ರೈಲು ಸಂಚಾರ ದಿಢೀರ್ ಸ್ಥಗಿತಗೊಂಡಿರುವ ಘಟನೆ, ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಬಾಳ್ಳುಪೇಟೆ ಬಳಿ ನಡೆದಿದೆ. ಕಳೆದ ವಾರ ಭೂಕುಸಿತ ಸಂಭವಿಸಿದ್ದ ಜಾಗದಲ್ಲೇ ಮತ್ತೆ ಅವಘಡ ನಡೆದಿದೆ. ಮಣ್ಣು ಕುಸಿದ ಕಾರಣ ಮಾರ್ಗ ಮಧ್ಯೆಯೇ ಯಶವಂತಪುರ-ಕಾರವಾರ ಎಕ್ಸ್ಪ್ರೆಸ್ ರೈಲು ಸ್ಥಗಿತಗೊಂಡ ಕಾರಣ, ಪ್ರಯಾಣಿಕರು ಪರದಾಡುವ ಸ್ಥಿತಿ ಎದುರಾಗಿತ್ತು.