ತುಮಕೂರು : ಕಲ್ಪತರು ನಾಡಿನಲ್ಲಿ ತಲ್ವಾರ್ ನಿಂದ ಕೇಕ್ ಕತ್ತರಿಸಿ, ಸಾರ್ವಜನಿಕರಿಗೆ ಭಯಹುಟ್ಟಿಸಿದ್ದ ಆರೋಪಿಗಳನ್ನ ಬಂಧಿಸಲಾಗಿದೆ. ಅಕ್ಟೋಬರ್ 12ರಂದು ಗುಬ್ಬಿ ಪಟ್ಟಣದ ಮಾರ್ಕೆಟ್ ರಸ್ತೆಯಲ್ಲಿ ತಲ್ವಾರ್ ನಿಂದ ಕೇಕ್ ಕತ್ತರಿಸಿ ಹುಚ್ಚಾಟ ಮೆರೆದಿದ್ದ ಗುಬ್ಬಿ ಕೆಚ್ಬಿ ಕಾಲೋನಿಯ ಸೈಯದ್ ಶಾರೂಖ್ ಎಂಬಾತನನ್ನ ಪೊಲೀಸರು ಬಂಧಿಸಿದ್ದಾರೆ.
ಸೈಯದ್ ಶಾರುಖ್, ಮುಕೇಶ್ ಪಾಷ ಎಂಬ ಯುವಕಕರು ಬಾಸ್ ಎಂದು ಕೇಕ್ ಮೇಲೆ ಬರೆಸಿ ತಲ್ವಾರ್ ನಲ್ಲಿ ಕೇಕ್ ಕತ್ತರಿಸಿ ಪುಂಟಾಟ ಪ್ರದರ್ಶಿಸಿದ್ದರು. ತಲ್ವಾರ್ ಹಿಡಿದು ರಸ್ತೆಯಲ್ಲಿ ಪ್ರದರ್ಶಿಸಿ ಜನರಲ್ಲಿ ಭಯ ಹುಟ್ಟಿಸಿದ್ದರು. ಹಾಗಾಗಿ ಯುವಕರು ಸಿನಿಮಾ ಸ್ಟೈಲ್ ನಲ್ಲಿ ಜನರಿಗೆ ಭಯ ಹುಟ್ಟಿಸುತ್ತಿರು ವಿಡಿಯೋ ಸಾಮಾಜಿಕ ಸಾಲತಾಣಗಳಲ್ಲಿ ವೂರಲ್ ಆಗಿದ್ದು, ಗುಬ್ಬಿ ಪೊಲೀಸರು ಸೈಯದ್ನನ್ನ ಬಂಧಿಸಿದ್ದಾರೆ.