ಕರ್ನಾಟಕ

ಚನ್ನಪಟ್ಟಣ ಉಪಚುನಾವಣೆ..ನಾಮಿನೇಷನ್ ಸಲ್ಲಿಸಿದ ನಿಖಿಲ್ ಕುಮಾರಸ್ವಾಮಿ..!

ಚನ್ನಪಟ್ಟಣ ಉಪಚುನಾವಣೆ ಅಖಾಡ ರಂಗೇರಿದೆ. NDA ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಇಂದು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

ಚನ್ನಪಟ್ಟಣ ಉಪಚುನಾವಣೆ ಕಾವು ಜೋರಾಗಿದೆ. ಕಾಂಗ್ರೆಸ್ ಹಾಗೂ ಎನ್ಡಿಎ ನಡುವೆ ಸಖತ್ ಪೈಪೋಟಿ ಶುರುವಾಗಿದೆ. ಎನ್ ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ, ಚನ್ನಪಟ್ಟಣದಲ್ಲಿ ಅದ್ದೂರಿ ಮೆರವಣಿಗೆ ಮೂಲಕ ತಹಶೀಲ್ದಾರ್ ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

ಜೆಡಿಎಸ್-ಬಿಜೆಪಿ ಬಾವುಟ ಹಿಡಿದಿದ್ದ ಜನಸಾಗರ ನಿಖಿಲ್ ಕುಮಾರಸ್ವಾಮಿಗೆ ಜೈಕಾರ ಹಾಕಿದ್ದಾರೆ. ಶೇರ್ವ ಸರ್ಕಲ್ ನಿಂದ ಹಿಡಿದು, ತಹಶೀಲ್ದಾರ್ ಕಚೇರಿವರೆಗೂ ಜನಸಾಗರದೇ ಹರಿದು ಬಂದಿತ್ತು. ನಿಖಿಲ್ ಕುಮಾರಸ್ವಾಮಿಗೆ ಸಂಸದ ಯದುವೀರ್, ಆರ್.ಅಶೋಕ್, ಹೆಚ್ಡಿಕೆ ಸೇರಿ ಹಲವರು ಸಾಥ್ ನೀಡಿದ್ರು.