ಚನ್ನಪಟ್ಟಣ ಉಪಚುನಾವಣೆ ಕಾವು ಜೋರಾಗಿದೆ. ಕಾಂಗ್ರೆಸ್ ಹಾಗೂ ಎನ್ಡಿಎ ನಡುವೆ ಸಖತ್ ಪೈಪೋಟಿ ಶುರುವಾಗಿದೆ. ಎನ್ ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ, ಚನ್ನಪಟ್ಟಣದಲ್ಲಿ ಅದ್ದೂರಿ ಮೆರವಣಿಗೆ ಮೂಲಕ ತಹಶೀಲ್ದಾರ್ ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ಜೆಡಿಎಸ್-ಬಿಜೆಪಿ ಬಾವುಟ ಹಿಡಿದಿದ್ದ ಜನಸಾಗರ ನಿಖಿಲ್ ಕುಮಾರಸ್ವಾಮಿಗೆ ಜೈಕಾರ ಹಾಕಿದ್ದಾರೆ. ಶೇರ್ವ ಸರ್ಕಲ್ ನಿಂದ ಹಿಡಿದು, ತಹಶೀಲ್ದಾರ್ ಕಚೇರಿವರೆಗೂ ಜನಸಾಗರದೇ ಹರಿದು ಬಂದಿತ್ತು. ನಿಖಿಲ್ ಕುಮಾರಸ್ವಾಮಿಗೆ ಸಂಸದ ಯದುವೀರ್, ಆರ್.ಅಶೋಕ್, ಹೆಚ್ಡಿಕೆ ಸೇರಿ ಹಲವರು ಸಾಥ್ ನೀಡಿದ್ರು.