ವೈರಲ್

ರೇಣುಕಾಸ್ವಾಮಿ ಕೊಲೆ ಪ್ರಕರಣ: ಡಿ ಬಾಸ್​ ಗ್ಯಾಂಗ್​ನ ಎ-8 ಆರೋಪಿಗೆ ಜಾಮೀನು..!

ಇಂದು ಸಂಜೆ ಜಾಮೀನು ಪ್ರತಿ ಜೈಲಾಧಿಕಾರಿಗೆ ತಲುಪಿದ ಬಳಿಕ ಆರೋಪಿ ರವಿಶಂಕರ್ ಬಿಡುಗಡೆ.

ತುಮಕೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ-8 ಆರೋಪಿಯಾಗಿದ್ದ ರವಿಶಂಕರ್ ಗೆ 57 ನೇ ಸಿಸಿಹೆಚ್ ನ್ಯಾಯಾಲಯದಿಂದ ಜಾಮೀನು ಮಂಜೂರಾಗಿದೆ.

ರೇಣುಕಾಸ್ವಾಮಿ ಕೊಲೆ‌ ಪ್ರಕರಣದಲ್ಲಿ ಎ-8 ಆರೋಪಿಯಾಗಿರುವ ಚಿತ್ರದುರ್ಗ ಮೂಲದ  ರವಿಶಂಕರ್ ಸದ್ಯ ತುಮಕೂರು ಜಿಲ್ಲಾ ಕಾರಾಗೃಹದಲ್ಲಿದ್ದಾರೆ. ಆರೋಪಿ ರವಿಶಂಕರ್ ಗೆ ಜಾಮೀನೂ ಮಂಜೂರಾದ ಹಿನ್ನಲೆ ಜಾಮೀನಿನ ಕಾನೂನು ಪ್ರಕ್ರಿಯೆ ಮುಗಿದ ಬಳಿಕ,  ಇಂದು ಸಂಜೆ ರವಿಶಂಕರ್ ಬಿಡುಗಡೆಯಾಗುವ ಸಾಧ್ಯತೆ ಇದೆ.