ಸ್ಪೆಷಲ್ ಸ್ಟೋರಿ

ಶಾಲೆಯ ಆಟದ ಮೈದಾನದಲ್ಲೇ ಭತ್ತ ನಾಟಿ ಮಾಡಿರುವ ಶಾಲಾ ಮಕ್ಕಳು..!

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಪ್ರಕೃತಿಯ ಮಧ್ಯೆ ಇರುವಂತಹ 'ಸ್ನೇಹ ಕನ್ನಡ ಮಾಧ್ಯಮ' ಶಾಲೆಯಲ್ಲಿ ಶಿಕ್ಷಕರಿಂದ ಮಕ್ಕಳಿಗೆ, ಕೃಷಿ ಮಾಡುವ ವಿಧಾನವನ್ನು ಹೇಳಿಕೊಡಲಾಗಿದೆ. ಅದರ ಭಾಗವಾಗಿ ಪ್ರಾಯೋಗಿಕವಾಗಿ ಮಕ್ಕಳು ಶಾಲಾ ಆಟದ ಮೈದಾನದಲ್ಲಿ, ಭತ್ತದ ಗದ್ದೆ ಮಾಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಸರ್ಕಾರಿ ಶಾಲೆ ಮಕ್ಕಳಿಗೆ, ಓದು-ಬರಹ, ಆಟದ ಜೊತೆ ಕೃಷಿ ಜ್ಞಾನವನ್ನೂ ತುಂಬುತ್ತಿರುವುದಕ್ಕೆ ಸಾಕ್ಷಿಯಾಗಿದೆ. ಗಿಡ-ಮರಗಳ ಮಧ್ಯೆ ಇರುವ ಶಾಲೆಯಲ್ಲಿಪ್ರತಿ ಬಾರಿಯೂ ಪರಿಸರಕ್ಕೆ ಸಂಬಂಧಿಸಿದ ವಿಷಯಗಳನ್ನು, ಮಕ್ಕಳಿಗೆ ತರಗತಿಯಲ್ಲೇ ಕಲಿಸುತ್ತಾರೆ. ಹಾಗೇನೆ ಈ ಬಾರಿಯೂ ಶಾಲೆ ಆವರಣದಲ್ಲಿ, ಮಕ್ಕಳಿಂದ ಭತ್ತದ ಗದ್ದೆ ಮಾಡಿಸಿದ್ದಾರೆ.

ಆಟದ ಮೈದಾನದಲ್ಲಿ ಭತ್ತದ ಕೃಷಿ.!

ಎಲ್ಲಾ ತರಗತಿಗಳಲ್ಲಿ ಆಹಾರ ಬೆಳೆಗಳನ್ನು ಬೆಳೆಸೋದು ಹೇಗೆ ಎಂಬುದರ ಬಗ್ಗೆ ಪಠ್ಯ ಇರುತ್ತವೆ. ಆ ಕಾರಣಕ್ಕಾಗಿ ಭ್ರಮಾಲೋಕದಲ್ಲೇ ಆಹಾರವನ್ನು ಈ ರೀತಿ ಬೆಳೆಸಬಹುದು, ಈ ರೀತಿಯಲ್ಲಿ ಕಟಾವು ಮಾಡಬೇಕು, ಸಂಸ್ಕರಣೆ ಹೇಗೆ ಮಾಡಬೇಕು ಎನ್ನುವ ವಿಚಾರವನ್ನು ಮಾತ್ರವೇ ಮಕ್ಕಳು ತಿಳಿದಿರುತ್ತಾರೆ. ಆದರೆ ಮಕ್ಕಳನ್ನು ಆ ಭ್ರಮಾಲೋಕದಿಂದ ವಾಸ್ತವದ ಕಡೆಗೆ ಕರೆ ತರಬೇಕು ಎನ್ನುವ ಉದ್ಧೇಶದಿಂದ, ಮಕ್ಕಳ ಆಟದ ಮೈದಾನದಲ್ಲಿ ಭತ್ತದ ಗದ್ದೆ ಮಾಡಿಸಲಾಗಿದೆ.

ಮಳೆಗಾಲದಲ್ಲಿ ಈ ಮೈದಾನ ಕೆಸರಿನಿಂದ ತುಂಬಿ ಮಕ್ಕಳಿಗೆ ಆಟವಾಡಲು ಸಾಧ್ಯವಾಗದ ಹಿನ್ನಲೆ, ಈ ಬಾರಿ ಮೈದಾನದಲ್ಲಿ ಭತ್ತದ ಬೆಳೆ ಬೆಳೆಸಲು ನಿರ್ಧರಿಸಿದ್ದಾರೆ. ಸಗಣಿ, ಬೂದಿ ಮತ್ತು ಸೊಪ್ಪು ಹಾಕಿ ಗದ್ದೆಯನ್ನು ಹದಮಾಡಲಾಗಿದ್ಧು, ಬಳಿಕ ನುರಿತ ಭತ್ತದ ಬೇಸಾಯ ಮಾಡುವವರನ್ನು ಕೆರಸಿ, ಅವರೊಂದಿಗೆ ಮಕ್ಕಳನ್ನೂ ಸೇರಿಸಿಕೊಂಡು ಭತ್ತದ ನಾಟಿ ಮಾಡಿದ್ದಾರೆ.