ಸ್ಪೆಷಲ್ ಸ್ಟೋರಿ

ಅಡಿಕೆ ಸಿಪ್ಪೆ ರಸದಿಂದ ತಯಾರಾಯ್ತು ಸಾಬೂನು​..! ಪೇಟೆಂಟ್​ ನೀಡಿದ ಕೇಂದ್ರ ಸರ್ಕಾರ

2021ರಲ್ಲಿ ಪೇಟೆಂಟ್​ ಪಡೆಯುವ ಕಾರ್ಯ ಆರಂಭಿಸಿದ್ದು, ರಾಷ್ಟ್ರೀಯ ಜೀವ ವೈವಿಧ್ಯ ಪ್ರಾಧಿಕಾರದ ಅನುಮೋದನೆ ಪಡೆದ ಬಳಿಕ ಭಾರತದ ಹಕ್ಕುಸ್ವಾಮ್ಯ ಕಾರ್ಯಾಲಯವು ಈಗ ಪೇಟೆಂಟ್​ ನೀಡಿದೆ.

ದಕ್ಷಿಣ ಕನ್ನಡ: ಬಂಟ್ವಾಳದ ಕೆದಿಲ ಹಾರ್ದಿಕ್ ಹರ್ಬಲ್ ಸಂಸ್ಥೆ ಅಡಿಕೆ ಸಿಪ್ಪೆ ರಸದಿಂದ ಸ್ನಾನದ ಸಾಬೂನನ್ನ ತಯಾರಿಸಿದೆ. ಈ ಸತ್ವಂ ಸಾಬೂನಿಗೆ ಕೇಂದ್ರ ಸರ್ಕಾರ ಪೇಟೆಂಟ್ ನೀಡಿದೆ.

‘ಹಣ್ಣಡಿಕೆ ಸಿಪ್ಪೆ ರಸದ ಜೊತೆಗೆ ಕೊತ್ತಂಬರಿ, ಲಾವಂಚ, ಅಲೊವೆರಾ, ಸಾಗುವಾನಿ ಎಲೆ, ಅರಿಶಿನ, ತೆಂಗಿನ ಎಣ್ಣೆ ಸೇರಿಸಿ ಈ ಸಾಬೂನನ್ನ ತಯಾರಿಸಲಾಗಿದೆ. 2021ರಲ್ಲಿ ಪೇಟೆಂಟ್ ಪಡೆಯುವ ಕಾರ್ಯ ಆರಂಭಿಸಿದ್ದು, ರಾಷ್ಟ್ರೀಯ ಜೀವ ವೈವಿಧ್ಯ ಪ್ರಾಧಿಕಾರದ ಅನುಮೋದನೆ ಪಡೆದ ಬಳಿಕ ಭಾರತದ ಹಕ್ಕುಸ್ವಾಮ್ಯ ಕಾರ್ಯಾಲಯವು ಈಗ ಪೇಟೆಂಟ್ ನೀಡಿದೆ’ ಎಂದು ಸಂಸ್ಥೆಯ ಸಿಇಓ ಮುರಳಿಧರ ಕೆ. ತಿಳಿಸಿದ್ದಾರೆ.