ದೇಶ

ಹಿಂದೂಗಳ ಭಾವನೆಯೇ ಸೈಬರ್ ವಂಚಕರ ಬಂಡವಾಳ.. ಕುಂಬಮೇಳ ಹೆಸ್ರಲ್ಲಿ ವಂಚನೆ!

ಹಿಂದೂಗಳ ಭಾವನೆಯೇ ಬಂಡವಾಳ ಮಾಡಿಕೊಂಡು ಕುಂಭಮೇಳದ ಹೆಸರಲ್ಲಿ ಸೈಬರ್ ವಂಚಕರು ವಂಚನೆಗಿಳಿದಿದ್ದಾರೆ.

ಬೆಂಗಳೂರು: ಹಿಂದೂಗಳ ಭಾವನೆಯೇ ಬಂಡವಾಳ ಮಾಡಿಕೊಂಡು ಕುಂಭಮೇಳದ ಹೆಸರಲ್ಲಿ ಸೈಬರ್ ವಂಚಕರು ವಂಚನೆಗಿಳಿದಿದ್ದಾರೆ. ಪ್ರಯಾಗ್‌ರಾಜ್‌ನ ಕುಂಭಮೇಳಕ್ಕೆ ಹೊರಟವರೇ ಇವರ ಟಾರ್ಗೆಟ್ ಆಗಿದ್ದು, ಕುಂಬಮೇಳ ಟೂರ್ ಪ್ಯಾಕೇಜ್ ಅಂತ ಆನ್ ಲೈನ್ ನಲ್ಲಿ ಸಿಕ್ಕ ಸಿಕ್ಕ ಸೈಟ್ ಗಳನ್ನ ಕ್ಲಿಕ್ ಮಾಡೋ ಮುನ್ನ ಎಚ್ಚರ. ಕುಂಭವೇಳಕ್ಕೆ ಹೋಗೋದಕ್ಕೆ ಗೂಗಲ್‌ನಲ್ಲಿ ಸರ್ಚ್ ಮಾಡ್ತಿದ್ದೀರಾ?ಗೂಗಲ್‌ನಲ್ಲಿ ಸರ್ಚ್ ಮಾಡೋರೇ ಟಾರ್ಗೆಟ್ ಮಾಡಿ ಮೋಸದ ಪ್ಯಾಕೇಜ್ ನ‌ ನಿಮಗಾಗಿ ವಂಚಕರು ತಯಾರು ಮಾಡಿದ್ದಾರೆ. ಟೂರ್ & ಟ್ರಾವೆಲ್ಸ್ ಕಂಪನಿಯಿಂದ ಕಾಲ್ ಮಾಡ್ತಿರೋದು ಅಂತಾ ಕಾಲ್ ಮಾಡಿ, ಸಾವಿರಾರು ರೂಪಾಯಿ ಹಾಕ್ತಿದ್ದಂತೆ ಮೊಬೈಲ್ ಸ್ವಿಚ್ಡ್ಆಫ್ ಮಾಡಿ ಎಸ್ಕೇಪ್ ಆಗ್ತಾರೆ.

ಜ್ಞಾನಭಾರತಿ ಠಾಣೆಯಲ್ಲಿ ಸೈಬರ್ ವಂಚಕರ ವಿರುದ್ಧ ಎಫ್ಐಆರ್ ದಾಖಲಾಗಿದೆ.  ಜ್ಞಾನಭಾರತಿ ಮೊದಲ ಹಂತದ ನಿವಾಸಿಯೊಬ್ಬರಿಂದ ಕುಂಭಮೇಳಕ್ಕೆ‌ ಹೋಗಲು ಪ್ಲಾನ್ ಮಾಡಿದ್ರು.ಹೇಗೆ ಹೋಗುವುದು ಅಂತ ಗೂಗಲ್‌ನಲ್ಲಿ ಸರ್ಚ್ ಮಾಡಿದ್ರು. ಸರ್ಚ್ ಮಾಡಿ ಕೆಲ ಸಮಯದ ನಂತರ ಅಪರಿಚಿತ ನಂಬರ್ ನಿಂದ ಕರೆ ಬಂದಿದೆ. ನಾನು ರಾಕೇಶ್,  ಸುಬ್ರಮಣ್ಯ ಟೂರ್ ಕಂಪನಿಯಿಂದ ಅಂತ ಪರಿಚಯ ಮಾಡಿಕೊಳ್ತಾನೆ.ನಮ್ಮದು ಟೂರ್ ಪ್ಯಾಕೇಜ್ ಕಂಪನಿಯಿದೆ, ನೀವು ಪ್ರಯಾಗ್ ರಾಜ್ ಹೋಗಲು ಇಷ್ಟಪಡ್ತೀರಾ ಅಂತಾ ಕೇಳಿದ್ದಾನೆ. ನಾವು ಕಡಿಮೆ ರೇಟ್ ನಲ್ಲಿ ಕುಂಭಮೇಳಕ್ಕೆ ಕರೆದುಕೊಂಡು ಹೋಗುವುದಾಗಿ ತಿಳಿಸಿ ಬಳಿಕ ವಾಟ್ಸಪ್ ನಲ್ಲಿ ಟ್ರಿಪ್ ಪ್ಲಾನ್ ಹಾಗೂ ಕಂಪನಿ ಫೇಸ್ ಬುಕ್ ಪೇಜ್ ಲಿಂಕ್ ಕಳಿಸ್ತಾನೆ.ಆತನ ಬಣ್ಣದ ಮಾತು ನಂಬಿದ ದೂರುದಾರ ನಾನು ಬರುವುದಾಗಿ ಒಪ್ಪಿಕೊಳ್ತಾರೆ. ಹಂತಹಂತವಾಗಿ ಅಪರಿಚಿತ ವ್ಯಕ್ತಿ‌ ನೀಡಿದ ಫೋನ್ ಪೇ‌ ನಂಬರ್ ಗೆ 64 ಸಾವಿರ ಹಣ ಹಾಕ್ತಾರೆ.

ಹಣ ಹಾಕಿ‌ದ ನಂತರ ಕರೆ ಮಾಡಿದ್ರೆ ಸ್ವೀಕಾರ ಮಾಡದ ಅಪರಿಚಿತ ವ್ಯಕ್ತಿ ಸ್ವಿಟ್ಚ್ ಆಫ್ ಮಾಡಿಕೊಂಡು ಎಸ್ಕೇಪ್ ಆಗಿದ್ದಾನೆ. ಇದರಿಂದ ಅನುಮಾನಗೊಂಡು ತಕ್ಷಣ ಸೈಬರ್ ಸಹಾಯವಾಣಿಯಲ್ಲಿ‌ ದೂರು ದಾಖಲಿಸಿ ಬಳಿಕ ಜ್ಞಾನಭಾರತಿ ಠಾಣೆಗೆ ಹೋಗಿ ದೂರು ದಾಖಲಿಸಿದ್ದಾರೆ‌. ಕೇಸ್ ದಾಖಲಾಗ್ತಿದ್ದಂತೆ ನಂಬರ್ ಸ್ವಿಚ್ ಆಫ್, ಫೇಸ್ ಬುಕ್ ಪೇಜ್ ಡಿಲೀಟ್ ಆಗಿದ್ದು,
ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿ ತನಿಖೆ ಮುಂದುವರಿಸಿದ್ದಾರೆ.