ಕರ್ನಾಟಕ

ಸ್ಮಶಾನಕ್ಕೆ ರಸ್ತೆ ಸಂಪರ್ಕ ಇಲ್ಲದೇ ಗ್ರಾಮಸ್ಥರು ಪರದಾಟ..ಭತ್ತದ ಗದ್ದೆಯಲ್ಲೇ ಮೃತದೇಹ ಹೊತ್ತೊಯ್ಯುವ ಪರಿಸ್ಥಿತಿ

ನಿನ್ನೆ ಓರ್ವ ವೃದ್ಧ ಸಾವನ್ನಪ್ಪಿದ್ದು, ಸ್ಮಶಾನಕ್ಕೆ ಭತ್ತದ ಗದ್ದೆಯಲ್ಲೇ ಕರೆದೊಯ್ದು ಅಂತ್ಯ ಸಂಸ್ಕಾರ ಮಾಡಿದ್ದಾರೆ. ಸ್ಮಶಾನ್ಕಕೆ ರಸ್ತೆ ನಿರ್ಮಾಣ ಮಾಡಿ ಕೊಡುವಂತೆ ಆಗ್ರಹಿಸಿದರೂ, ಈ ಬಗ್ಗೆ ಜನಪ್ರತಿನಿಧಿಗಳು, ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಶವ ಸಂಸ್ಕಾರಕ್ಕೆ ಶವ ಸಾಗಿಸಲು ಸ್ಮಶಾನಕ್ಕೆ ರಸ್ತೆ ಸಂಪರ್ಕವಿಲ್ಲದೇ, ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಹಳೆನಾಗನಹಳ್ಳಿಯ ಜನರು ಪರದಾಡುವಂತಾಗಿದೆ. ಭತ್ತದ ಗದ್ದೆಯಲ್ಲೇ ನಡೆದುಕೊಂಡು ಹೋಗಿ, ಗ್ರಾಮದ ಹೊರ ವಲಯದಲ್ಲಿರುವ ಸ್ಮಶಾನದಲ್ಲಿ ಶವ ಸಂಸ್ಕಾರ ಮಾಡುವ ಅನಿವಾರ್ಯತೆ ಇದೆ.

ನಿನ್ನೆ ಓರ್ವ ವೃದ್ಧ ಸಾವನ್ನಪ್ಪಿದ್ದು, ಸ್ಮಶಾನಕ್ಕೆ ಭತ್ತದ ಗದ್ದೆಯಲ್ಲೇ ಕರೆದೊಯ್ದು ಅಂತ್ಯ ಸಂಸ್ಕಾರ ಮಾಡಿದ್ದಾರೆ. ಸ್ಮಶಾನ್ಕಕೆ ರಸ್ತೆ ನಿರ್ಮಾಣ ಮಾಡಿ  ಕೊಡುವಂತೆ ಆಗ್ರಹಿಸಿದರೂ, ಈ ಬಗ್ಗೆ ಜನಪ್ರತಿನಿಧಿಗಳು, ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಅಲ್ಲದೇ ಕಳೆದ 60 ವರ್ಷಗಳಿಂದ ನಮ್ಮ ಸಮಸ್ಯೆ ಬಗೆ ಹರಿದಿಲ್ಲ  ಎಂದು ಆಕ್ರೋಶ ಹೊರ ಹಾಕಿದ್ದಾರೆ.