ಕರ್ನಾಟಕ

ತುಮಕೂರಿನಲ್ಲಿ ದಸರಾ ಜಂಬೂಸವಾರಿಗೆ ಡಾ. ಜಿ. ಪರಮೇಶ್ವರ್ ಚಾಲನೆ

ವಿಜಯದಶಮಿ ಪ್ರಯುಕ್ತ ತುಮಕೂರಿನಲ್ಲಿ ನಡೆಯುತ್ತಿರುವ ಜಂಬೂಸವಾರಿಗೆ, ಡಾ. ಜಿ. ಪರಮೇಶ್ವರ್ ಚಾಲನೆ ನೀಡಿದ್ದಾರೆ.

ತುಮಕೂರಿನಲ್ಲಿ ಜಿಲ್ಲಾಡಳಿತದಿಂದ ಕಳೆದ 9 ದಿನಗಳಿಂದ ನಡೆಯುತ್ತಿರುವ, ದಸರಾ ಆಚರಣೆ ಕಳೆಗಟ್ಟಿದೆ. ವಿಜಯದಶಮಿ ಪ್ರಯುಕ್ತ ತುಮಕೂರಿನಲ್ಲಿ ನಡೆಯುತ್ತಿರುವ ಜಂಬೂಸವಾರಿಗೆ, ಡಾ. ಜಿ. ಪರಮೇಶ್ವರ್ ಚಾಲನೆ ನೀಡಿದ್ದಾರೆ.
 
ನಗರದ ಪ್ರಮುಖ ರಸ್ತೆಗಳಲ್ಲಿ ಜಂಬೂಸವಾರಿ ಸಾಗಲಿದ್ದು, 10 ಅಶ್ವದಳದ ಕುದುರೆ, ಹತ್ತಾರು ಕಲಾ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿವೆ. ಚಾಮುಂಡಿ ದೇವಿಯ ವಿಗ್ರಹ ಹೊತ್ತು ರಾಜಗಂಭೀರ್ಯದಿಂದ ಆನೆ ಲಕ್ಷ್ಮಿ ಹೆಜ್ಜೆ ಹಾಕಿದೆ. ಲಕ್ಷ್ಮೀ ಆನೆಗೆ ಕೊಟ್ಟ ನೊಣವಿನಕೆರೆ ಮಠದ ಮತ್ತೊಂದು ಆನೆ ಸಾಥ್ ಕೊಟ್ಟಿದೆ.
 
ಮುಜರಾಯಿ ದೇವಾಲಯದ 50 ಕ್ಕೂ ಹೆಚ್ಚು ದೇವರಮೂರ್ತಿಗಳು ಮೆರವಣಿಗೆಯಲ್ಲಿ ಭಾಗಿಯಾಗಿದ್ದು, ರಸ್ತೆ ಬದಿಯಲ್ಲಿ ನಿಂತು ಜನರು ಮೆರವಣಿಗೆ ವೀಕ್ಷಿಸುತ್ತಿದ್ದಾರೆ.