ಕರ್ನಾಟಕ

ಉದ್ಯಮಿ ಸಂತೋಷ್ ಕೊಲೆ ಕೇಸ್...ಇಬ್ಬರು ಆರೋಪಿಗಳು ಖಾಕಿ ವಶಕ್ಕೆ..!

ಸಂತೋಷ್ ಪತ್ನಿ ಉಮಾಗೆ ಸಾಮಾಜಿಕ ಜಾಲತಾಣದಲ್ಲಿ ಪರಿಚಿತ ಗೆಳೆಯರಾದ, ಪವನ್ ಮತ್ತು ಶೋಭೇಶ್​​​​​ ಗೌಡ ಎಂಬುವರನ್ನು ವಶಕ್ಕೆ ಪಡೆದಿದ್ದಾರೆ.

ಉದ್ಯಮಿ ಸಂತೋಷ್ ಪದ್ಮಣ್ಣನವರ ಕೊಲೆ ಪ್ರಕರಣದಡಿ, ಸಿಸಿಟಿವಿ ಆಧರಿಸಿ ಪೊಲೀಸರು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಸಂತೋಷ್ ಪತ್ನಿ ಉಮಾಗೆ ಸಾಮಾಜಿಕ ಜಾಲತಾಣದಲ್ಲಿ ಪರಿಚಿತ ಗೆಳೆಯರಾದ, ಪವನ್ ಮತ್ತು ಶೋಭೇಶ್ ಗೌಡ ಎಂಬುವರನ್ನು ವಶಕ್ಕೆ ಪಡೆದಿದ್ದಾರೆ.

ಸಂತೋಷ್ ಪುತ್ರಿಯಾದ ಸಂಜನಾ ತಾಯಿ ಮೇಲೆಯೇ ಪೊಲೀಸರಿಗೆ ದೂರು ನೀಡಿದ್ದರು. ಹೂತಿದ್ದ ಸಂತೋಷ್ ಶವವನ್ನು, ಹೊರ ತೆಗೆದು ಮರಣೋತ್ತರ ಪರೀಕ್ಷೆ ನಡೆಸಿದ ಬೆನ್ನಲ್ಲೇ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಇದೀಗ ಆರೋಪಿಗಳ ಜೊತೆ ಸಂತೋಷ್ ಪತ್ನಿ ಉಮಾಗೂ ವಿಚಾರಣೆ ನಡೆಸುತ್ತಿದ್ದಾರೆ. ತನಿಖೆ ಬಳಿಕ ಸತ್ಯಾಂಶ ಹೊರ ಬೀಳಲಿದೆ.