ಬೆಂಗಳೂರು : ಎರಡು ತಿಂಗಳೊಳಗೆ ಕೆಪಿಎಸ್ಸಿ ಮರು ಪರೀಕ್ಷೆಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಭಾಷಾಂತರದಲ್ಲಿ ಎಡವಟ್ಟು ಹಾಗೂ ವಾಸ್ತವಾಂಶಗಳ ತಪ್ಪುಗಳಿಂದ ಕನ್ನಡ ಮಾಧ್ಯಮ ಅಭ್ಯರ್ಥಿಗಳು ಸೇರಿದಂತೆ ಪ್ರತಿಯೊಬ್ಬರಿಗೂ ಅನ್ಯಾಯವಾಗಿದೆ. ಈ ಹಿನ್ನೆಲೆ ಕರ್ನಾಟಕ ರಕ್ಷಣಾ ವೇದಿಕೆ ನೇತೃತ್ವದಲ್ಲಿ ವಿದ್ಯಾರ್ಥಿಗಳು, ಸಾಹಿತಿಗಳು, ಚಿಂತಕರು ಇನ್ನೂ ಅನೇಕರು ಇಂದು ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಈ ಪ್ರತಿಭಟನೆಗೆ ಮಣಿದು ಸರ್ಕಾರ ಮರು ಪರೀಕ್ಷೆ ನಡೆಸಲು ಕೆಪಿಎಸ್ಸಿಗೆ ಸೂಚನೆ ನೀಡಿದೆ. ಈಗ ನಡೆದ ಪರೀಕ್ಷೆಯ ಎಡವಟ್ಟಿನಲ್ಲಿ ಕೆಪಿಎಸ್ಸಿಯದ್ದೇ ಲೋಪ ಇರುವ ಕಾರಣ ಅಭ್ಯರ್ಥಿಗಳಿಂದ ಮತ್ತೊಮ್ಮ ಶುಲ್ಕ ಸಂಗ್ರಹಿಸುವಂತಿಲ್ಲ. ಕೆಪಿಎಸ್ಸಿಯೇ ಪರೀಕ್ಷೆಯ ವೆಚ್ಚ ಭರಿಸಬೇಕು ಎಂದು ಆದೇಶಿಸಿದ್ದಾರೆ.