ಸ್ಪೆಷಲ್ ಸ್ಟೋರಿ

ಚೈತ್ರ ಕುಂದಾಪುರಗೆ ಕಂಕಣ ಭಾಗ್ಯ ಕೂಡಿ ಬಂತಾ, ಬಿಗ್ ಬಾಸ್ ಮನೆಯಲ್ಲಿ ಚೈತ್ರ ಹೇಳಿದ್ದೇನು..?

ಬಿಗ್ ಬಾಸ್ ಸೀಸನ್ 11ರ ಆಟ 4ನೇ ವಾರಕ್ಕೆ ಕಾಲಿಟ್ಟು ಭರ್ಜರಿ ಯಶಸ್ಸನ್ನ ಗಳಿಸಿದೆ.. ಈಗಾಗ್ಲೆ ಮನೆಯಿಂದ ಹೊರನಡೆದಿರೋ ಲಾಯರ್ ಜಗದೀಶ್ ರಿಂದಾಗಿ ಟಿಆರ್ಪಿ ಏನಾದ್ರು ಕುಸಿತ ಕಾಣುತ್ತಾ ಅನ್ನೋ ಕುತೂಹಲ ಮೂಡಿದೆ, ಯಾಕಂದ್ರೆ ಈ ಬಾರಿಯ ಬಿಗ್ ಬಾಸ್ನಲ್ಲಿ ಲಾಯರ್ ಜಗದೀಶ್ ಮಾತೇ ಸಖತ್ ಸುದ್ದು ಮಾಡಿತ್ತು, ಇದು ಒಂದು ಕಡೆಯಾದ್ರೆ ದೊಡ್ಮನೆಯಲ್ಲಿ ಈ ಬಾರಿಯೂ ಕೆಲ ಲವ್ ಸ್ಟೋರಿಗಳು ಸದ್ದು ಮಾಡುತ್ತಿವೆ.

ಸ್ನೇಹಿತರೇ ದೊಡ್ಮನೆಯಲ್ಲಿ ಈ ಬಾರಿಯೂ ಕೆಲ ಲವ್ ಸ್ಟೋರಿಗಳು ಸದ್ದು ಮಾಡುತ್ತಿವೆ. ಇನ್ನೂ ಚೈತ್ರಾ ಕುಂದಾಪುರ ಸಹ ಸ್ಪರ್ಧಿಗಳ ಮೇಲೆ ಗರಂ ಆಗಿದ್ದಾರೆ. ಲವ್ ಸ್ಟೋರಿ ಶುರು ಮಾಡಿದ್ರೆ, ಬೇರೆ ಅವರೊಂದಿಗೆ ಸಂಬಂಧ ಕಟ್ಟಿದ್ರೆ ಮೆಟ್ಟು ತೆಗೆದುಕೊಂಡು ಬಾರಿಸುತ್ತೇನೆ ಎಂದು ಚೈತ್ರಾ ನೇರವಾಗಿ ವಾರ್ನಿಂಗ್ ಕೊಟ್ಟಿದ್ದಾರೆ.
ಬಿಗ್ ಬಾಸ್ ಮನೆಯ ಬೆಡ್ ರೂಮ್ ಏರಿಯಾದಲ್ಲಿ ಚೈತ್ರಾ ಕುಂದಾಪುರ, ಹಂಸ ಮತ್ತು ಮಾನಸಾ ಇದ್ದರು. ಈ ವೇಳೆ, ಬಿಗ್ ಬಾಸ್ ಮನೆಯಲ್ಲಿ ಹುಟ್ಟಿಕೊಳ್ಳುವ ಲವ್ ಸ್ಟೋರಿಗಳ ಬಗ್ಗೆ ಚರ್ಚೆ ಶುರುವಾಯಿತು. ಆಗ ತ್ರಿವಿಕ್ರಮ್  ಮತ್ತು ರಂಜಿತ್ ಜೊತೆ ಲವ್ ಸ್ಟೋರಿ ಇದೆ ಎಂದು ಹಂಸ ಕುರಿತು ಸುರೇಶ್ ನೀಡಿರುವ ಹೇಳಿಕೆ ಬಗ್ಗೆ ಬೇಸರ ವ್ಯಕ್ತಪಡಿಸಿದರು.
ಆಗ ಮಾತಿನ ಮಧ್ಯೆ ಚೈತ್ರಾ, ನನ್ನ ವಿಚಾರದಲ್ಲಿ ಲವ್ ಸ್ಟೋರಿ ಶುರು ಮಾಡಿದರೆ, ಮೆಟ್ಟು ತಗೊಂಡು ಬಾರಿಸುತ್ತೇನೆ. ಹೊರಗೆ ಹೋದರೂ ತೊಂದರೆ ಇಲ್ಲ. ನಾನು ಮದುವೆ ಫಿಕ್ಸ್ ಮಾಡಿಕೊಂಡು ಬಿಗ್ ಬಾಸ್ಗೆ ಬಂದಿದ್ದೇನೆ. ನನಗೆ ಯಾರ ಹತ್ತಿರವೂ ಸಂಬಂಧ ಕಟ್ಟಬೇಡಿ ಅಂತ ನಾನು ಮೊದಲೇ ಹೇಳಿದ್ದೇನೆ ಖಡಕ್ ಆಗಿ ಮಾತನಾಡಿದ್ದಾರೆ.
ಈ ಮೂಲಕ ತಮಗೆ ಮದುವೆ ಫಿಕ್ಸ್ ಆಗಿರುವ ಬಗ್ಗೆ ಚೈತ್ರಾ ಮೊದಲ ಬಾರಿ ಬಿಗ್ ಬಾಸ್ ಮನೆಯಲ್ಲಿ ತಿಳಿಸಿದ್ದಾರೆ. ಹಾಗಾದ್ರೆ ಅವರು ಮದುವೆಯಾಗುವ ಆ ಹುಡುಗ ಯಾರು ಅನ್ನೋ ಕುತೂಹಲ ಮೂಡಿಸಿರೋದಂತೂ ಸತ್ಯ..