ಸ್ಪೆಷಲ್ ಸ್ಟೋರಿ

ಅವಮಾನ ಸಹಿಸದ ದ್ರೋಣಾಚಾರ್ಯರು ಅದೆಂತಹ ಪ್ರತಿಜ್ಞೆ ಮಾಡಿದ್ದರು ಗೊತ್ತಾ?

ಮಹಾಭಾರತದ ವಿಷಯ ಬಂದಾಗ ಗುರು ಎಂದ ತಕ್ಷಣ ನಮಗೆ ತಕ್ಷಣ ನೆನಪಾಗುವುದೇ ಗುರು ದ್ರೋಣಾಚಾರ್ಯರು, ಕೌರವರು, ಪಾಂಡವರ ಗುರುಗಳಾದ ದ್ರೋಣಾಚಾರ್ಯರು, ಬಹಳಷ್ಟು ವಿದ್ಯೆಯಲ್ಲಿ ಪಾರಂಗತರಾದರು, ಆದರೆ ಲಕ್ಷಿ ಒಲಿಯಲಿಲ್ಲ.

ಮಹಾಭಾರತದ ವಿಷಯ ಬಂದಾಗ ಗುರು ಎಂದ ತಕ್ಷಣ ನಮಗೆ ತಕ್ಷಣ ನೆನಪಾಗುವುದೇ ಗುರು ದ್ರೋಣಾಚಾರ್ಯರು, ಕೌರವರು, ಪಾಂಡವರ ಗುರುಗಳಾದ ದ್ರೋಣಾಚಾರ್ಯರು, ಬಹಳಷ್ಟು ವಿದ್ಯೆಯಲ್ಲಿ ಪಾರಂಗತರಾದರು, ಆದರೆ ಲಕ್ಷಿ ಒಲಿಯಲಿಲ್ಲ. 

ದ್ರೋಣಾಚಾರ್ಯರು ಋಷಿ ಭಾರದ್ವಾಜರ ಪುತ್ರ. ವಿವಿಧ ರೀತಿಯ ಸಮರ ಕಲೆಗಳಲ್ಲಿ ದ್ರೋಣಾಚಾರ್ಯರು ಜ್ಞಾನ ಮತ್ತು ಪ್ರಾವೀಣ್ಯತೆಯನ್ನು ಹೊಂದಿದ್ದರು. ದ್ರೋಣರು ಎಲ್ಲಾ ವಿದ್ಯೆಯನ್ನೂ ಪರಶುರಾಮರಿಂದ ಕಲಿಯುತ್ತಾರೆ.
ಎಷ್ಟೇ ವಿದ್ಯಾವಂತರಾದರೂ ದ್ರೋಣಾಚಾರ್ಯರ ಬಡತನವು ನಿವಾರಣೆಯಾಗಲಿಲ್ಲ. ಮಗನಿಗೆ ಕುಡಿಯುವ ಹಾಲನ್ನೂ ಹೊಂದಿಸಲು ಸಾಧ್ಯವಾಗದೆ ಇದ್ದಾಗ, ಸಹಾಯ ಕೇಳಲು ತನ್ನೊಡನೆ ವಿದ್ಯೆ ಕಲಿತ ಪ್ರೀಯ ಗೆಳೆಯ ದೃಪದನ ಆಸ್ಥಾನಕ್ಕೆ ಬರುತ್ತಾರೆ.

ದೃಪದನ ಆಸ್ಥಾನದಲ್ಲಿ ಆಗಿದ್ದೇನು?
ದ್ರೋಣಾಚಾರ್ಯರು ನೇರವಾಗಿ ರಾಜ್ಯಸಭೆಯನ್ನು ಪ್ರವೇಶಿಸುತ್ತಾರೆ. ದ್ರುಪದನ ಜೊತೆಯಲ್ಲಿ   ಪ್ರೀತಿಯಿಂದ ಮಾತನಾಡುತ್ತಾರೆ. ಆದರೆ ದ್ರುಪದ, ದ್ರೋಣರೊಂದಿಗೆ ಸ್ನೇಹದಿಂದ ವರ್ತಿಸುವುದಿಲ್ಲ. ಇದರಿಂದ ದ್ರೋಣರಿಗೆ ಬಹಳ ಬೇಸರವಾಗುತ್ತದೆ. ಆದರೂ ಅದನ್ನು ಸಹಿಸಿಕೊಂಡು ಮಹಾರಾಜ ನಿನಗೆ ನನ್ನ ನೆನಪಿಲ್ಲವೇ ಎಂದು ಕೇಳುತ್ತಾರೆ. ವಿದ್ಯಾರ್ಥಿಗಳಾಗಿದ್ದಾಗ ನಾವಿಬ್ಬರೂ ಜೊತೆಗೂಡಿ ಧನುರ್ವಿದ್ಯೆಯನ್ನು ಅಭ್ಯಾಸ ಮಾಡಿದ್ದೇವೆ. ನಿನಗೆ ವಿದ್ಯೆಯ ಜೊತೆ ಲಕ್ಷ್ಮಿ ಬಂದಳು. ಬಡತನದ ನೆರಳೇ ನಿನಗಿಲ್ಲ. ಆದರೆ ನನಗೆ ಸರಸ್ವತಿ ಒಲಿದಳೇ ಹೊರತು ಲಕ್ಷ್ಮಿ ಒಳಿಯಲೇ ಇಲ್ಲ. ಈ ಕಾರಣದಿಂದಾಗಿ ಇಂದಿಗೂ ನಾನು ಬಡತನದ ಬೇಗೆಯಲ್ಲಿ ನಲುಗುತ್ತಿದ್ದೇನೆ. ಆದ್ದರಿಂದ ನಿನ್ನ ಮೇಲೆ ಅಪಾರ ವಿಶ್ವಾಸವಿಟ್ಟು ಸ್ನೇಹಿತನಾಗಿ ಸಹಾಯ ಕೇಳಲು ಬಂದಿದ್ದೇನೆ ಎಂದು ತಿಳಿಸುತ್ತಾರೆ. ದೃಪದನಿಗೆ ದ್ರೋಣಾಚಾರ್ಯ ಗೊತ್ತಿದ್ದರೂ, ಕಡು ಬಡವನನ್ನು ಸ್ನೇಹಿತ ಎಂದು ಹೇಳಿಕೊಳ್ಳಲು ಮನಸ್ಸು ಒಪ್ಪುವುದಿಲ್ಲ. ಆದ್ದರಿಂದ ದ್ರೋಣಾಚಾರ್ಯರ ನೆನಪೇ ಇಲ್ಲದಂತೆ ದ್ರುಪದ ವರ್ತಿಸುತ್ತಾನೆ.

ದ್ರೋಣಾಚಾರ್ಯರಿಗೆ ಅವಮಾನಿಸಿದ ದ್ರುಪದ..!
ದ್ರುಪದ, ದ್ರೋಣಾಚಾರ್ಯರಿಗೆ ನನ್ನಂತ ರಾಜ ಎಂದಿಗೂ ನಿನ್ನಂತ ಕಡು ಬಡವನೊಂದಿಗೆ ಸ್ನೇಹ ಬೆಳೆಸುವುದಿಲ್ಲ. ಯಾವುದೋ ಒಂದು ಕೆಟ್ಟ ಗಳಿಗೆಯಲ್ಲಿ ನಾವಿಬ್ಬರೂ ಜೊತೆಯಲ್ಲಿರಬಹುದು. ಅದನ್ನೇ ನೀನು ಸ್ನೇಹ ಎಂದು ತಿಳಿದರೆ ಅದು ನನ್ನ ತಪ್ಪಲ್ಲ ಎಂದು ಹೇಳುತ್ತಾನೆ. ಇದರಿಂದಾಗಿ ಜೀವಮಾನ ಪರ್ಯಂತ ನಾವುಗಳು ಸ್ನೇಹಿತರಾಗುವ ಅವಶ್ಯಕತೆ ಇಲ್ಲ. ಇಡೀ ಪಾಂಚಾಲ ದೇಶದ ಮಹಾರಾಜನಾಗಿರುವ ನನಗೂ, ಜನರಿಗೆ ಬೇಕಾದ ಧಾರ್ಮಿಕ ಕೆಲಸಗಳನ್ನು ಮಾಡಿಕೊಡುತ್ತಿರುವ ನಿನಗೂ ಎಲ್ಲಿಯ ಸಂಬಂಧ? ಒಂದು ಹೊತ್ತಿನ ಅನ್ನಕ್ಕೂ ಕಷ್ಟಪಡುತ್ತಿರುವ ನೀನು ನನಗೆ ಸ್ನೇಹಿತನಾಗಲು ಯೋಗ್ಯನಲ್ಲ ಎಂದು ಹೀಯಾಳಿಸುತ್ತಾನೆ. ವೈಭವದ ಜೀವನವನ್ನು ನಡೆಸುತ್ತಿರುವ ನನಗೂ ತಿನ್ನಲು ಅನ್ನವಿಲ್ಲದೆ ಕಷ್ಟ ಪಡುತ್ತಿರುವ ನಿನಗೂ ಸಂಬಂಧವೇ ಇಲ್ಲ. ನೀನು ಯಾರೆಂದೇ ನನಗೆ ತಿಳಿಯದು. ಆದ್ದರಿಂದ ಬಂದ ದಾರಿಗೆ ಸುಂಕವಿಲ್ಲವೆಂದು ತಿಳಿದು ಇಲ್ಲಿಂದ ನೀನು ವಾಪಸ್‌ ಹೊರಡು ಎನ್ನುತ್ತಾನೆ. ಆದರೆ ದ್ರೋಣರು ದೃಪದನಿಂದ ಎಂದಿಗೂ ಈ ಮಾತುಗಳನ್ನು ನಿರೀಕ್ಷಿಸಿರುವುದಿಲ್ಲ. ಇದರಿಂದ ಅವರು ಬಹಳ ನಿರಾಶರಾಗುತ್ತಾರೆ. ತನಗೆ ಈ ರೀತಿ ಅವಮಾನ ಮಾಡಿದ್ದಕ್ಕೆ ಕೋಪಗೊಳ್ಳುತ್ತಾರೆ.

ಅವಮಾನಗೊಂಡ ದ್ರೋಣಾಚಾರ್ಯರು ಪ್ರತಿಜ್ಞೆ ..!
ಹಿಂದಿನ ದಿನಗಳನ್ನು ಮರೆತು ಈ ತುಂಬಿದ ಸಭೆಯಲ್ಲಿ ನನ್ನನ್ನು ಅವಮಾನಿಸಿದೆ. ನನ್ನನ್ನು ಬಡವನೆಂದು ಹೀಯಾಳಿಸಿದೆ. ಇಂದು ಒಂದು ಶಪಥವನ್ನು ಮಾಡುತ್ತಿದ್ದೇನೆ. ಮುಂದೊಂದು ದಿನ ಕ್ಷತ್ರಿಯ ಕುಮಾರನನ್ನು ನನ್ನ ಶಿಷ್ಯನನ್ನಾಗಿ ಸ್ವೀಕಾರ ಮಾಡುತ್ತೇನೆ. ನಾನು ಕಷ್ಟಪಟ್ಟು ಕಲಿತಿರುವ ವಿದ್ಯೆಯನ್ನೆಲ್ಲಾ ಅವನಿಗೆ ದಾರೆ ಎರೆಯುತ್ತೇನೆ. ಅವನ ಮೂಲಕ ನಿನ್ನನ್ನು ಬಂಧಿಸಿ ನನ್ನ ಕಾಲ ಬಳಿಗೆ ಬೀಳಿಸಲಿಲ್ಲ ಎಂದಾದರೆ, ನಾನು ದ್ರೋಣಾಚಾರ್ಯನೇ ಅಲ್ಲ ಎಂದು ಹೇಳುತ್ತಾರೆ. ದ್ರೋಣಾಚಾರ್ಯರ ಈ ಬಿರುಸಿನ ಮಾತು ರಾಜ್ಯಸಭೆಯಲ್ಲಿ ಇದ್ದವರಲ್ಲಿ ನಡಕವನ್ನೇ ಉಂಟುಮಾಡುತ್ತದೆ. ಆದರೆ ದ್ರುಪದನಿಗೆ ಇದು ಅರ್ಥವಾಗುವುದಿಲ್ಲ. ತಾನಾಗಿಯೇ ಸೋಲನ್ನು ತನ್ನ ಬೆನ್ನಿಗೆ ಕಟ್ಟಿಕೊಳ್ಳುತ್ತಾನೆ.

ಮುಂದೆ ದ್ರೋಣಾಚಾರ್ಯರು ಭೀಷ್ಮರನ್ನು ಭೇಟಿ ಮಾಡುತ್ತಾರೆ. ತಮ್ಮ ಬಡತನ, ದ್ರುಪದರ ಜೊತೆಗಿನ ಪ್ರತಿಜ್ಞೆ ಎಲ್ಲವನ್ನೂ ಹೇಳಿಕೊಳ್ಳುತ್ತಾರೆ. ಭೀಷ್ಮನ ಸೂಚನೆಯಂತೆ ಕೌರವರು ಹಾಗೂ ಪಾಂಡವರಿಗೆ ವಿದ್ಯೆ ಕಲಿಸಲು ಒಪ್ಪುತ್ತಾರೆ. ಭೀಷ್ಮ, ತಾನು ಒಪ್ಪಿಕೊಂಡರೆ ದ್ರೋಣರ ಪತಿ, ಮಗನಿಗೆ ರಾಜಾತಿಥ್ಯ ನೀಡುತ್ತಾರೆ.