ಕರ್ನಾಟಕ

ರಾಜ್ಯ ರಾಜಧಾನಿಯಲ್ಲಿ ಮರೆಯಾದ ಸೂರ್ಯ.. ಜೋರಾದ ವರುಣಾರ್ಭಟ.. ನಿರಂರತರ ಮಳೆಗೆ ಕಂಗಾಲಾದ ಬೆಂಗಳೂರಿಗರು

ಮಳೆಯಿಂದಾಗಿ ಸರಿಯಾಗಿ ಆಟೋ, ಕ್ಯಾಬ್, ಬಸ್ ಗಳು ಸಿಗದೆ ಜನ ಪರದಾಟ ನಡೆಸಿಡಿದ್ದಾರೆ. ಇನ್ನೂ ವಾಹನ ಸವಾರರ ಕತೆ ಕೇಳೋದೇ ಬೇಡ. ಮುಖ್ಯರಸ್ತೆ, ಅಂಡರ್ ಪಾಸ್​ ಗಳೆಲ್ಲಾ ಜಲಾವೃತವಾಗಿದ್ದು, ಸಂಚಾರ ದಟ್ಟಣೆ ಉಂಟಾಗಿದೆ.

ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರು ಮಹಾ ಮಳೆಗೆ ತತ್ತರಿಸಿ ಹೋಗಿದೆ. ಮೂರು ದಿನಗಳಿಂದ ಬಿಟ್ಟು ಬಿಡದೇ ಮಳೆಯಾಗುತ್ತಿದೆ. ನಿನ್ನೆ  ಸಣ್ಣ ಬ್ರೇಕ್ ತೆಗೆದುಕೊಂಡಿದ್ದ ವರುಣ, ಮತ್ತಿಂದು ಆರ್ಭಟಿಸುತ್ತಿದ್ದಾನೆ. 

ಹೌದು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುತ್ತಿದ್ದು, ಸಾರ್ವಜನಿಕರು ಕಂಗಾಲಾಗಿದ್ದಾರೆ. ಮಳೆಯಿಂದಾಗಿ ಸರಿಯಾಗಿ ಆಟೋ, ಕ್ಯಾಬ್, ಬಸ್ ಗಳು ಸಿಗದೆ ಜನ ಪರದಾಟ ನಡೆಸಿಡಿದ್ದಾರೆ. ಇನ್ನೂ ವಾಹನ ಸವಾರರ ಕತೆ ಕೇಳೋದೇ ಬೇಡ. ಮುಖ್ಯರಸ್ತೆ, ಅಂಡರ್ ಪಾಸ್ ಗಳೆಲ್ಲಾ ಜಲಾವೃತವಾಗಿದ್ದು, ಸಂಚಾರ ದಟ್ಟಣೆ ಉಂಟಾಗಿದೆ.

ಇನ್ನು ಮೂರು ದಿನಗಳಿಂದ ಸೂರ್ಯನ ಸುಳಿವಿಲ್ಲದೇ ಎಡಬಿಡದೇ ಸುರಿಯುತ್ತಿರುವ ಮಳೆಗೆ ಬೆಂಗಳೂರಿಗರು ತತ್ತರಿಸಿ ಹೋಗಿದ್ದಾರೆ.