ಬೆಂಗಳೂರು : ಬಿಗ್ ಬಾಸ್ ಸ್ಪರ್ಧಿಯಾಗಿದ್ದ ಲಾಯರ್ ಜಗದೀಶ್ ಅವರು ಇತ್ತೀಚೆಗಷ್ಟೇ ಹೊರಗೆ ಬಂದಿದ್ದಾರೆ. ಈಗ ಸಂದರ್ಶನದಲ್ಲಿ ದರ್ಶನ್ ಪ್ರಕರಣ ಕುರಿತು ಮಾತನಾಡಿ. ಮತ್ತೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದಾರೆ. ದರ್ಶನ್ ಕುಟುಂದವರಾರು ನನ್ನ ಸಂಪರ್ಕಿಸಿಲ್ಲ, ಈ ಕೇಸ್ ನನಗೆ ಕೊಟ್ರೆ ದರ್ಶನ್ ಅವರನ್ನು ಜೈಲಿಂದ ಬಿಡಿಸಿಕೊಂಡು ಬಂದು ವಿಜಯಲಕ್ಷ್ಮಿ ಹತ್ತಿರ ಬಿಟ್ಟುಬಿಡುತ್ತೆವೆ ಎಂದು ದರ್ಶನ್ ಪರ ಬ್ಯಾಟ್ ಬೀಸಿದ್ದಾರೆ.
ದರ್ಶನ್ ಯಾವುದೇ ತಪ್ಪು ಮಾಡಿಲ್ಲ, ನಾನು ದರ್ಶನ್ ಪರವಾಗಿ ಹೇಳಿಕೆ ನೀಡಿದರೂ ದರ್ಶನ್ ಕುಟುಂಬದವರಾರು ತನ್ನನ್ನು ಸಂಪರ್ಕಿಸಿಲ್ಲ. ಹೀಗಾಗಿ ದರ್ಶನ್ ಒಬ್ಬ ಶತದಡ್ಡ. ದರ್ಶನ್ ಪರವಾಗಿ ನನ್ನಿಂದ ಆದಷ್ಟು ಹೋರಾಟ ಮಾಡಿದ್ದೇನೆ. ಆದರೆ ಯಾರೂ ಕೂಡ ತನ್ನನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ. ದರ್ಶನ್ ಬೇಗ ಹೊರಗೆ ಬಂದು ಅವರ ಕುಟುಂಬದವರನ್ನು ಸೇರಲಿ ಎಂಬುದೇ ನನ್ನ ಆಸೆ ಎಂದು ಹೇಳಿದ್ದಾರೆ.