ಕರ್ನಾಟಕ

ಮಧುಗಿರಿಯಲ್ಲಿ ಚಿರತೆ ಪ್ರತ್ಯಕ್ಷ : ಸ್ಥಳೀಯರಲ್ಲಿ ಹೆಚ್ಚಾಯ್ತು ಆತಂಕ..!

ಮಧುಗಿರಿ ಪಟ್ಟಣದ ದಂಡಿ ಮಾರಮ್ಮನ ದೇವಸ್ಥಾನದ ಸುತ್ತಾಮುತ್ತ ಚಿರತೆ ಸಂಚರಿಸಿದ್ದು, ಚಿರತೆ ಓಡಾಟದ ದೃಶ್ಯ ಸ್ಥಳೀಯರ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ.

ತುಮಕೂರು :  ಮಧುಗಿರಿಯ ತಾಲೂಕಿನ ದಂಡಿ ಮಾರಮ್ಮನ ದೇವಸ್ಥಾನದ ಬಳಿ ಚಿರತೆಯೊಂದು ಪ್ರತ್ಯಕ್ಷವಾಗಿದ್ದು, ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದೆ.

ಮಧುಗಿರಿ ಪಟ್ಟಣದ ದಂಡಿ ಮಾರಮ್ಮನ ದೇವಸ್ಥಾನದ ಸುತ್ತಾಮುತ್ತ ಚಿರತೆ ಸಂಚರಿಸಿದ್ದು, ಚಿರತೆ ಓಡಾಟದ ದೃಶ್ಯ  ಸ್ಥಳೀಯರ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ. ದಂಡಿ ಮಾರಮ್ಮನ ದೇವಸ್ಥಾನಕ್ಕೆ ಪ್ರತಿನಿತ್ಯ  ನೂರಾರು ಭಕ್ತರು ಭೇಟಿ ನೀಡುತ್ತಾರೆ. ಆದ್ರೀಗ ಚಿರತೆ ಪ್ರತ್ಯಕ್ಷವಾಗಿದ್ದು, ಭಕ್ತರ ಆತಂಕಕ್ಕೆ ಕಾರಣವಾಗಿದೆ. ಹಾಗಾಗಿ ಆದಷ್ಟು ಬೇಗ ಚಿರತೆಯನ್ನ ಸೆರೆಹಿಡಿಯುವಂತೆ ಅರಣ್ಯಾಧಿಕಾರಿಗಳಿಗೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.