ಕರ್ನಾಟಕ

ಮಹಾಲಕ್ಷ್ಮಿ ಬರ್ಬರ ಕೊಲೆ ಕೇಸ್; ಆರೋಪಿ ತಲೆ ಮರೆಸಿಕೊಂಡಿರುವ ಜಾಗ ಪತ್ತೆ..! ಕಮಿಷನರ್ ಕೊಟ್ಟ ಸುಳಿವೇನು?

ಮಹಾಲಕ್ಷ್ಮಿ ಬರ್ಬರ ಕೊಲೆ ಪ್ರಕರಣ ಇಡೀ ಬೆಂಗಳೂರನ್ನೇ ಬೆಚ್ಚಿ ಬೀಳಿಸಿದ್ದು, ಆರೋಪಿಯ ಸುಳಿವು ಸಿಕ್ಕಿದೆ. ಆರೋಪಿ ಬಗ್ಗೆ ಬೆಂಗಳೂರು ಕಮಿಷನರ್ ಬಿ. ದಯಾನಂದ್ ಮಾಹಿತಿ ನೀಡಿದ್ದಾರೆ.

ಬೆಂಗಳೂರು : ಬೆಂಗಳೂರಿನ ವೈಯಾಲಿಕಾವಲ್ನಲ್ಲಿ ಮಹಾಲಕ್ಷ್ನಿ ಎಂಬ ಮಹಿಳೆಯನ್ನ ಕೊಲೆ ಮಾಡಿ, ಫ್ರಿಜ್ ನಲ್ಲಿ ತುಂಡು ತುಂಡುಗಳನ್ನಾಗಿ ಕತ್ತರಿಸಿ ಇಡಲಾಗಿತ್ತು. ಈ ಭೀಕರ ಕೃತ್ಯ ಇಡೀ ಬೆಂಗಳೂರನ್ನೇ ಬೆಚ್ಚಿ ಬೀಳಿಸಿದೆ. ಆದ್ರೆ, ಕೊಲೆ ಆರೋಪಿ ಮಾತ್ರ ತಲೆ ಮರೆಸಿಕೊಂಡಿದ್ದು, ಪಶ್ಚಿಮ ಬಂಗಾಳದಲ್ಲಿ ತಲೆ ಮರೆಸಿಕೊಂಡಿದ್ದಾನೆ ಎಂಬ ಮಾಹಿತಿಯನ್ನ ಪೊಲೀಸರು ನೀಡಿದ್ದಾರೆ.

ಪ್ರಕರಣ ಸಂಬಂಧ ಬೆಂಗಳೂರು ನಗರಾಯುಕ್ತ ಬಿ. ದಯಾನಂದ್ ಪ್ರತಿಕ್ರಿಯಿಸಿದ್ದಾರೆ. ಆರೋಪಿ ಬೆಂಗಳೂರಿನಲ್ಲಿ ವಾಸವಾಗಿದ್ದ ಎಂದು ತಿಳಿದುಬಂದಿದ್ದು, ಮೂಲತಃ ಆತಪಶ್ಚಿಮ ಬಂಗಾಳದವನೆಂದು ತಿಳಿದುಬಂದಿದೆ. ಆದಷ್ಟು ಬೇಗ ಆರೋಪಿಯನ್ನ ಪತ್ತೆ ಹಚ್ಚುತ್ತೇವೆ ಎಂದರರು.