ಕರ್ನಾಟಕ

ಪಾದಾಚಾರಿಗಳಿಗೆ ಅಪರಿಚಿತ ವಾಹನ ಡಿಕ್ಕಿ; ಇಬ್ಬರು ಸ್ಥಳದದಲ್ಲೇ ಮೃತ

ಅಪಘಾತದಲ್ಲಿ ಮಣಿಗೆರೆ ಗ್ರಾಮದ ಮರಿಸ್ವಾಮಿ(52) ಹಾಗೂ ತಿಬ್ಬಯ್ಯ(60) ಮೃತಪಟ್ಟಿದ್ದಾರೆ. ಇನ್ನೂ ಪಾದಾಚಾರಿಗಳಿಗೆ ಡಿಕ್ಕಿಹೊಡೆದು ಕಾರು ಸಮೇತ ಚಾಲಕ ಎಸ್ಕೇಪ್‌ ಆಗಿದ್ದು, ಕೆ.ಎಂ.ದೊಡ್ಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪರಿಚಿತ ಕಾರು ಡಿಕ್ಕಿಯಾಗಿ ಇಬ್ಬರು ಪಾದಾಚಾರಿಗಳು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮಂಡ್ಯದಲ್ಲಿ ನಡೆದಿದೆ.  ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಮಣಿಗೆರೆಯ ಮದ್ದೂರು-ಮಳವಳ್ಳಿ ಹೆದ್ದಾರಿಯಲ್ಲಿ ಈ ದುರ್ಘಟನೆ ಸಂಭವಿಸಿದೆ.
ಅಪಘಾತದಲ್ಲಿ ಮಣಿಗೆರೆ ಗ್ರಾಮದ ಮರಿಸ್ವಾಮಿ(52) ಹಾಗೂ ತಿಬ್ಬಯ್ಯ(60)  ಮೃತಪಟ್ಟಿದ್ದಾರೆ.  ಇನ್ನೂ ಪಾದಾಚಾರಿಗಳಿಗೆ ಡಿಕ್ಕಿಹೊಡೆದು ಕಾರು ಸಮೇತ ಚಾಲಕ ಎಸ್ಕೇಪ್‌ ಆಗಿದ್ದು, ಕೆ.ಎಂ.ದೊಡ್ಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.