ಕರ್ನಾಟಕ

ಸ್ಟೋನಿ ಬ್ರೂಕ್ ಪಬ್​ ನಲ್ಲೇ ಕುಳಿತು ರೇಣುಕಾಸ್ವಾಮಿ ಕೊಲೆಗೆ ಸ್ಕೆಚ್ ಹಾಕಿದ ಹಂತಕರು..!

ದರ್ಶನ್ ಬಂಟ ವಿನಯ್ ಒಡೆತನದ ಬಾರ್ ಆ್ಯಂಡ್ ರೆಸ್ಟೋರೆಂಟ್ ಸ್ಟೋನಿ ಬ್ರೂಕ್ ನಲ್ಲಿ ರೇಣುಕಾಸ್ವಾಮಿಯನ್ನ ಕಿಡ್ನ್ಯಾಪ್ ಮಾಡುವ ಬಗ್ಗೆ ಪ್ಲಾನ್ ಮಾಡಲಾಗಿತ್ತು. ಕೊಲೆಗೂ ಮುಂಚೆ ಹಾಗೂ ಕೊಲೆ ನಂತರ ಇದೇ ರೆಸ್ಟೋರೆಂಟ್ ನಲ್ಲಿ ಕೂತು ದರ್ಶನ್ ಸಹಚರರು ಪ್ಲಾನ್ ರೂಪಿಸುತ್ತಿದ್ದರು.

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ನಡೆದು ಎರಡು ತಿಂಗಳುಗಳೇ ಕಳೆದರೂ ಕೂಡ ಪ್ರಕರಣ ತಣ್ಣಗಾಗುವ ಯಾವ ಲಕ್ಷಣಗಳು ಕಾಣಿಸುತ್ತಿಲ್ಲ. ಕೊಲೆ ಪ್ರಕರಣದಲ್ಲಿ ದಿನಕ್ಕೊಂದು ಹೊಸಹೊಸ ಮಾಹಿತಿಗಳು ಬಗೆದಷ್ಟು ಬಯಲಾಗುತ್ತಲೇ ಇದೆ. ಈ ಮಧ್ಯೆ ರೇಣುಕಾಸ್ವಾಮಿ ಕೊಲೆ ಹಿಂದಿನ ಪ್ಲಾನ್ ಎಲ್ಲಿ ನಡೆದಿತ್ತು? ಯಾರೆಲ್ಲಾ ಸೇರಿ ಕೊಲೆಗೆ ಸ್ಕೆಚ್ ಹಾಕಿದ್ರು ಎಂಬ ಮಾಹಿತಿ ಹೊರಬಿದ್ದಿದೆ. 

ದರ್ಶನ್ ಬಂಟ ವಿನಯ್  ಒಡೆತನದ ಬಾರ್ ಆ್ಯಂಡ್  ರೆಸ್ಟೋರೆಂಟ್ ಸ್ಟೋನಿ ಬ್ರೂಕ್ ನಲ್ಲಿ  ರೇಣುಕಾಸ್ವಾಮಿಯನ್ನ  ಕಿಡ್ನ್ಯಾಪ್ ಮಾಡುವ ಬಗ್ಗೆ ಪ್ಲಾನ್ ಮಾಡಲಾಗಿತ್ತು. 
ಕೊಲೆಗೂ ಮುಂಚೆ ಹಾಗೂ ಕೊಲೆ ನಂತರ ಇದೇ ರೆಸ್ಟೋರೆಂಟ್ ನಲ್ಲಿ  ಕೂತು ದರ್ಶನ್ ಸಹಚರರು ಪ್ಲಾನ್ ರೂಪಿಸುತ್ತಿದ್ದರು. ಜೊತೆಗೆ ಕೊಲೆಗು ಮುನ್ನ ಹಾಗೂ ರೇಣುಕಾಸ್ವಾಮಿ ಕೊಲೆಯಾದ ನಂತರವೂ ಹಂತಕರು ಇದೇ ಸ್ಟೋನಿ ಬ್ರ್ಯೂಕ್ ನಲ್ಲಿ ಪಾರ್ಟಿ ಮಾಡಿದ್ದರು. ಈ ಸಂಬಂಧ ಸ್ಟೋನಿ ಬ್ರೂಕ್ ನಲ್ಲಿ ದರ್ಶನ್ ರನ್ನ ಕೂರಿಸಿಕೊಂಡು ಪೊಲೀಸರು ಹೇಳಿಕೆ ದಾಖಲಿಸಿಕೊಂಡಿದ್ದರು.

ಸದ್ಯ ಸ್ಟೋರಿ ಬ್ರೋಕ್ ನಲ್ಲಿ  ದರ್ಶನ, ನಾಗರಾಜ, ವಿನಯ್ ಚಿಕ್ಕಣ ಕರದೊಯ್ದು ಮಹಜರು ಮಾಡಿದ ಪೋಟೋ ಈಗ ಫುಲ್ ವೈರಲ್ ಆಗಿದೆ. 

ಮುಖ್ಯವಾಗಿ ಇದೇ ಸ್ಟೋನಿ ಬ್ರೋಕ್ ಪಬ್ ನಲ್ಲಿರೋ D Boss ಸಫಾರಿ ಕಾಟೇಜ್ ನಲ್ಲಿ ರೇಣುಕಾಸ್ವಾಮಿ ಕೊಲೆಗೆ ಸ್ಕೆಚ್ ರೆಡಿಯಾಗಿತ್ತು. ಎಸಿ ಕ್ಯಾಬಿನ್ ನಲ್ಲಿ ಕುಳಿತು ರೇಣುಕಾಸ್ವಾಮಿ  ಕೊಲೆಗೆ ನಾನಾ ರೀತಿಯ ತಂತ್ರಗಳನ್ನ ಹೆಣೆಯಲಾಗಿತ್ತು. ರೇಣುಕಾಸ್ವಾಮಿ ಬೆಂಗಳೂರಿಗೆ ಬರುತ್ತಿರೋ ಪ್ರತಿಯೊಂದು ಅಪ್ ಡೇಟ್ ಗಳನ್ನ ದರ್ಶನ್ ಇದೇ ಜಾಗದಲ್ಲಿ ಕುಳಿತು ಪಡೆಯುತ್ತಿದ್ದರು. 

ಜೂನ್ 7 ರಂದು ಶನಿವಾರ ನಟ ಚಿಕ್ಕಣ್ಣ ಕೂಡ ಇದೇ ಕ್ಯಾಟೇಜ್ ನಲ್ಲಿ ದರ್ಶನ್ ರನ್ನ ಭೇಟಿ ಮಾಡಿದ್ದರು. ಈ ಸಂಬಂಧ ಸ್ಕೆಚ್ ರೆಡಿ ಮಾಡಿದ ಜಾಗದಲ್ಲಿ ಕುಳಿತು ಪೊಲೀಸರು ಮಹಜರು ಮಾಡಿದ್ದರು. 

ಹೌದು ಕೊಲೆಗು ಮೊದಲು ಸ್ಟೋನಿ ಬ್ರೂಕ್ ನಲ್ಲಿ ಪಾರ್ಟಿ ಮಾಡಲಾಗಿತ್ತು. ಪಾರ್ಟಿ ನಂತ್ರ ದರ್ಶನ್  ಕೊಲೆ ನಡೆದ ಸ್ಥಳಕ್ಕೆ  ಹೋಗಿದ್ದರು. ಹಾಗಾಗಿ ಪಾರ್ಟಿ ಮಾಡುವಾಗ ಯಾಱರು ಎಲ್ಲಿ ಇದ್ರು ಅನ್ನೋದು ಫೋಟೋದಲ್ಲಿ ಸ್ಪಷ್ಟವಾಗಿದೆ.