ಕರ್ನಾಟಕ

ರಾಜ್ಯಾದ್ಯಂತ ಗೌರಿ-ಗಣೇಶ ಸಂಭ್ರಮ.. ಮೈಸೂರಿನಲ್ಲಿ ಗಮನ ಸೆಳೆದ ವಿಶೇಷ ಗಣಪತಿ

2023-24ನೇ ಸಾಲಿನ ಒಂದಷ್ಟು ವಿಶೇಷತೆಗಳನ್ನು ಒಳಗೊಂಡ ಗಣೇಶ ಮೂರ್ತಿಯನ್ನು ಮೈಸೂರಿನಲ್ಲಿ ಕೂರಿಸಲಾಗಿದೆ. ಈ ವಿಶೇಷ ಗಣಪತಿ ಜನರ ಗಮನ ಸೆಳೆಯುವಂತಿದೆ.

ರಾಜ್ಯದಾದ್ಯಂತ ಗಣೇಶ ಚತುರ್ಥಿ ಸಂಭ್ರಮ ಮನೆ ಮಾಡಿದೆ. ಮನೆಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿ ಕೂರಿಸಿ ಜನರೆಲ್ಲ ಸಂಭ್ರಮಿಸುತ್ತಿದ್ದಾರೆ. ಇದರ ನಡುವೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕೂರಿಸಿರುವ ವಿಶೇಷ ಗಣಪತಿ, ಗಮನ ಸೆಳೆಯುವಂತಿದೆ. 

ಗಣಪತಿಯ ಅಕ್ಕಪಕ್ಕದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಂಸದ ಯದುವೀರ್ ಒಡೆಯರ್ ನಿಂತಿರುವ ಮೂರ್ತಿ ಒಂದುಕಡೆ. ಅದರ ಪಕ್ಕದಲ್ಲಿ ಅಯೋಧ್ಯೆ ರಾಮಲಲ್ಲಾ ವಿಗ್ರಹದ ಜೊತೆ ಗಣೇಶ ಮೂರ್ತಿ ಹಾಗೂ ರಾಮಲಲ್ಲಾ ಶಿಲ್ಪಿ ಅರುಣ್ ಯೋಗಿರಾಜ್ ನಿಂತಿರುವ ಮೂರ್ತಿ. ಇತ್ತ ಮೇಘಾಲಯದ ರಾಜ್ಯಪಾಲರಾದ ಕನ್ನಡಿಗ ಸಿ.ಹೆಚ್ ವಿಜಯಶಂಕರ್, ಕಾಂತಾರ ಮೂಲಕ ರಾಷ್ಟ್ರಪ್ರಶಸ್ತಿ ಮುಡಿಗೇರಿಸಿಕೊಂಡ ನಟ ರಿಷಬ್ ಶೆಟ್ಟಿ, ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಸೇರಿದಂತೆ ಹಲವು ಮೂರ್ತಿಗಳನ್ನು ಗಣಪತಿಯ ಅಕ್ಕಪಕ್ಕದಲ್ಲಿ ನಿಲ್ಲಿಸಲಾಗಿದೆ. ಈ ವಿಶೇಷ ಗಣಪತಿ ಎಲ್ಲರ ಗಮನ ಸೆಳೆದಿದೆ.