ಸಕ್ಕರೆ ನಾಡು ಮಂಡ್ಯದಲ್ಲಿ ಬೆಳೆದು ನಿಂತ ಕಬ್ಬು ಕಟಾವು ಮಾಡಿಸಲು ಕಾರ್ಮಿಕರು ಸಿಗದೆ ಮೈಶುಗರ್ ಆಡಳಿತ ಮಂಡಳಿ ಮತ್ತು ಜಿಲ್ಲಾಡಳಿತ ಪರದಾಡುತ್ತಿದೆ. ಈ ನಿಟ್ಟಿನಲ್ಲಿ ಕ.ಸಾ.ಪ ಸಮ್ಮೇಳನ ಕಾರ್ಯಕ್ರಮದ ಹೆಸರಲ್ಲಿ ಕಬ್ಬು ಕಟಾವು ಎಂಬ ಸ್ಪರ್ಧೆಯನ್ನ ಜಿಲ್ಲಾಡಳಿತ ಆಯೋಜಿಸಿದೆ. ಈ ಮೂಲಕ ಬೆಳೆದು ನಿಂತ ಕಬ್ಬು ಕಟಾವು ಮಾಡಿಸಲು ಪ್ಲ್ಯಾನ್ ಮಾಡಿದೆ. ಈ ಮಧ್ಯೆ ಸಾಮಾಜಿಕ ಜಾಲತಾಣದಲ್ಲಿ ಕಬ್ಬು ಕಟಾವು ಚಾಲೆಂಜ್, ಬಾ ಗುರು ಕಬ್ಬು ಕಡಿ ಹೆಸರಿನ ಪೋಸ್ಟರ್ ವೈರಲ್ ಆಗಿದೆ.
ಕಬ್ಬು ಕಟಾವಿನ ಸಮಸ್ಯೆಗೆ ಜಿಲ್ಲಾಡಳಿತದ ಈ ಮಾಸ್ಟರ್ ಫ್ಲ್ಯಾನ್ ಎಷ್ಟರ ಮಟ್ಟಿಗೆ ವರ್ಕೌಟ್ ಆಗುತ್ತೆ ಅನ್ನೋದೆ ಕುತೂಹಲ.