ಕರ್ನಾಟಕ

ಪರಪ್ಪನ ಅಗ್ರಹಾರ ಜೈಲಲ್ಲಿ ದರ್ಶನ್ ಗೆ ರಾಜಾತಿಥ್ಯ ಪ್ರಕರಣ..ನಟನಿಗೆ ಸಿಮ್, ಫೋನ್ ಕೊಟ್ಟವ ಪತ್ತೆ..!

ಬ್ಯಾಡರಹಳ್ಳಿ ರೌಡಿ ಶೀಟರ್ ಸತ್ಯನಿಗೆ ದರ್ಶನ್ ವಿಡಿಯೋ ಕಾಲ್ ಮಾಡಿದ್ದು ವೈರಲ್ ಆಗಿತ್ತು. ಇದರ ಬೆನ್ನಲ್ಲೇ ತಲೆ ಕೆಡಿಸಿಕೊಂಡು, ದರ್ಶನ್ ಗೆ ಫೋನ್ ಕೊಟ್ಟಿದ್ಯಾರು ಎಂದು ತಿಳಿಯಲು ತನಿಖೆಗಿಳಿದ ಪೊಲೀಸರು, ಕೊನೆಗೂ ಫೋನ್ ಹಾಗೂ ಸಿಮ್ ಕೊಟ್ಟವನನ್ನು ಪತ್ತೆ ಹಚ್ಚಿಇದ್ದಾರೆ.

ರೇಣುಕಾಸ್ವಾಮಿ ಕೊಲೆ ಆರೋಪಿ ದರ್ಶನ್ ಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ, ರಾಜಾತಿಥ್ಯ ನೀಡಲಾಗಿರುವ ಕುರಿತ ಫೋಟೋ ವೈರಲ್ ಆಗಿತ್ತು. ಅಲ್ಲದೇ ಬ್ಯಾಡರಹಳ್ಳಿ ರೌಡಿ ಶೀಟರ್ ಸತ್ಯನಿಗೆ ವಿಡಿಯೋ ಕಾಲ್ ಮಾಡಿದ್ದು ಕೂಡ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ತಲೆ ಕೆಡಿಸಿಕೊಂಡು, ದರ್ಶನ್ ಗೆ ಫೋನ್ ಕೊಟ್ಟಿದ್ಯಾರು ಎಂದು ತಿಳಿಯಲು ತನಿಖೆಗಿಳಿದ ಪೊಲೀಸರು, ಕೊನೆಗೂ ಫೋನ್ ಹಾಗೂ ಸಿಮ್ ಕೊಟ್ಟವನನ್ನು ಪತ್ತೆ ಹಚ್ಚಿಇದ್ದಾರೆ.

ಅಸಲಿಗೆ ಆ ಸಿಮ್ ಹಾಗೂ ಮೊಬೈಲ್ ನ ದರ್ಶನ್ ಗೆ ಕೊಟ್ಟಿದ್ದಾಗಿರಲಿಲ್ಲ. ಆ ಫೋನ್ ಧರ್ಮನಿಗೆ ಸೇರಿದ್ದಾಗಿತ್ತು. ಬಾಣಸವಾಡಿ ರೌಡಿ ಶೀಟರ್ ಧರ್ಮನಿಗೆ ಬಾಣಸವಾಡಿಯ ಟೂರ್ಸ್ ಅಂಡ್ ಟ್ರಾವೆಲ್ಸ್ ಮಾಲೀಕ ಮಣಿವಣ್ಣನ್ ಎಂಬಾತ ಸಿಮ್ ನೀಡಿದ್ದ ಎಂಬುದು ಗೊತ್ತಾಗಿದೆ.  ಬಟ್ಟೆಯಲ್ಲಿ ಅಡಗಿಸಿ ಜೈಲಿಗೆ ಕಳುಹಿಸಿದ್ದ. ಮೊದಲು ಜೈಲಿನ ಕೆಲ ಭ್ರಷ್ಟ ಅಧಿಕಾರಿಗಳ ಮೂಲಕ ಮೊಬೈಲ್ ಅನ್ನೂ ಸಹ ಕಳುಹಿಸಿದ್ದ ಎನ್ನಲಾಗಿದೆ.