ಕನ್ನಡ ಬಿಗ್ ಬಾಸ್-11ನಲ್ಲಿ ಸ್ಪರ್ಧಿಗಳ ನಡುವಿನ ಜಗಳ ದಿನೇ ದಿನೆ ತಾರಕಕ್ಕೇರುತ್ತಿದೆ. ಎದುರುಗಡೆ ಇರೋರು ಯಾರು, ಏನು ಅನ್ನೋದನ್ನೂ ಕೂಡ ಲೆಕ್ಕಿಸದೇ ಕಿತ್ತಾಡ್ತಿದ್ದಾರೆ. ಗೇಮ್ ಗೋಸ್ಕರ ಕಚ್ಚಾಡಿಕೊಳ್ಳುತ್ತಿರುವ ಸ್ಪರ್ಧಿಗಳ ವರ್ತನೆ ಮಿತಿ ಮೀರಿದೆ. ಇದರಿಂದ ಬಿಗ್ ಬಾಸ್ ವೀಕ್ಷಕರಿಗೆ ಎಲ್ಲಿಲ್ಲದ ಅಸಮಾಧಾನ ಶುರುವಾಗಿದೆ. ವಯಸ್ಸು ಮೀರಿದ ಮಾತುಗಳು, ಅತಿರೇಕದ ವರ್ತನೆಗಳು ಹೆಚ್ಚಾಗಿವೆ. ಇತ್ತೀಚಿನ ಎಪಿಸೋಡ್ ನಲ್ಲಿ ಲಾಯರ್ ಜಗದೀಶ್ ಹಾಗೂ ಮನೆಮಂದಿ ನಡುವೆ ನಡೆದ ಜಗಳದ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಅಲ್ಲದೇ ಗಲಾಟೆ ತಾರಕಕ್ಕೇರಿ ಲಾಯರ್ ಜಗದೀಶ್ ನ, ಮತ್ತೋರ್ವ ಸ್ಪರ್ಧಿ ರಂಜಿತ್ ತಳ್ಳಿದರು ಎಂಬ ಕಾರಣಕ್ಕೆ ಅವರನ್ನು ಮನೆಯಿಂದ ಆಚೆ ಕಳಿಸಿದ್ರು. ಇದೀಗ ಟಾಸ್ಕ್ ವೇಳೆ ಮಾನಸಾನ ತಳ್ಳಿ ಉಗ್ರಂ ಮಂಜು ಕಿಡಿ ಕಾರಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ರಾಜಕೀಯ ಚದುರಂಗದಾಟ ನಡೆಯುತ್ತಿದೆ. ಈ ಟಾಸ್ಕ್ ನಲ್ಲಿ ಎರಡು ಪಕ್ಷಗಳ ನಡುವಿನ ಜಟಾಪಟಿ ಜೋರಾಗಿದೆ. ಈ ಟಾಸ್ಕ್ ನಲ್ಲಿ ಉಗ್ರಂ ಮಂಜು ಹಾಗೂ ಮಾನಸಾ ಇರುವ ಟೀಮ್ ಬೇರೆ ಬೇರೆಯಾಗಿದೆ. ಮಾತಿನ ಜಟಾಪಟಿ ನಡುವೆ ಅಂಟಿಸಿದ್ದ ಪೋಸ್ಟರ್ ಒಂದನ್ನು, ಮಾನಸಾ ತೆಗೆದು ಹಾಕುತ್ತಾರೆ. ಇದರಿಂದ ಕೋಪಗೊಂಡ ಉಗ್ರಂ ಮಂಜು ಮಾನಸಾರನ್ನು ತಳ್ಳಿ ನೋವು ಮಾಡಿದ್ದಾರೆ. ಈ ಘಟನೆಯ ಬಗ್ಗೆಯೂ ಬಿಗ್ ಬಾಸ್ ಕ್ರಮ ತೆಗೆದುಕೊಳ್ಳುತ್ತಾರಾ..? ಉಗ್ರಂ ಮಂಜುನ ಮನೆಯಿಂದ ಹೊರಗೆ ಕಳಿಸುತ್ತಾರಾ ಎಂಬ ಪ್ರಶ್ನೆ ಎದುರಾಗಿದೆ.